Saturday, April 27, 2024
Homeಚಿಕ್ಕಮಗಳೂರು“ದೇವ್ರೇ ನನ್ನ ಹುಡ್ಗಿನಾ ದಪ್ಪ ಮಾಡ್ಸು, ನನ್ನ ಮದುವೆ ಯಾವುದೇ ವಿಘ್ನ ಇಲ್ಲದೇ ನಡೆಯೋ ಹಾಗೇ...

“ದೇವ್ರೇ ನನ್ನ ಹುಡ್ಗಿನಾ ದಪ್ಪ ಮಾಡ್ಸು, ನನ್ನ ಮದುವೆ ಯಾವುದೇ ವಿಘ್ನ ಇಲ್ಲದೇ ನಡೆಯೋ ಹಾಗೇ ಮಾಡು”; ದೇವರಿಗೆ ಹೀಗೊಂದು ವಿಚಿತ್ರ ಪತ್ರ ಬರೆದ ಭಕ್ತ ಮಹಾಶಯ

spot_img
- Advertisement -
- Advertisement -

ಚಿಕ್ಕಮಗಳೂರು : ದೇವರಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಬೇರೆ ಬೇರೆ ರೀತಿಯಲ್ಲಿ ಪ್ರಾರ್ಥನೆ ಮಾಡೋದನ್ನು ನಾವು ನೋಡಿದ್ದೇವೆ.ಆದ್ರೆ ಈ ರೀತಿಯೊಂದು ಪ್ರಾರ್ಥನೆ ಯಾರು ಮಾಡಿರಲ್ಲ ಅನ್ಸುತ್ತೆ. ಅದು ಕೂಡ ಪತ್ರದ ಮೂಲಕ.

ಯೆಸ್…. ಚಿಕ್ಕಮಗಳೂರು ಜಿಲ್ಲೆಯ  ಮೂಡಿಗೆರೆ ತಾಲೂಕಿನ ಕಳಸ ಗ್ರಾಮದ ಪ್ರಸಿದ್ದ ಕಳಸೇಶ್ವರ ಸ್ವಾಮಿ ದೇಗುಲದ ಕಾಣಿಕೆ ಹುಂಡಿಯಲ್ಲಿ ಭಕ್ತನೊಬ್ಬ ವಿಚಿತ್ರ ರೀತಿಯ ಬರೆದಿರುವ ಪತ್ರ ಪತ್ತೆಯಾಗಿದೆ.

ಪತ್ರದಲ್ಲಿ ಅಮ್ಮಾ ತಾಯೇ…. ರಮೇಶ್-ಮಂಜುಳ ಸಂಬಳವನ್ನ ರಾಜಮ್ಮನ ಕೈಗೆ ಕೊಡಲಿ. ಐಶ್ವರ್ಯ ಬೇಗ ದಪ್ಪ ಆಗಿ, ಪುಷ್ಠಿಯಾಗಿ ಕಾಣುವಂತೆ ಮಾಡು. ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ದಯೇ ತರೋ ಜೊತೆಗೆ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವಂತೆ ಪರಿಪರಿಯಾಗಿ ಬರೆದು ಬೇಡಿಕೊಳ್ಳಲಾಗಿದೆ.

ಮಂಡ್ಯ ಜಿಲ್ಲೆಯ ಪ್ರಸಿದ್ದ ಉಕ್ಕಡ ಮಾರಮ್ಮ ದೇವಿ ಹೆಸರಿನಲ್ಲಿ ಪತ್ರ ಬರೆಯಲಾಗಿದ್ದು, ಅಮ್ಮಾ ತಾಯೇ ಮೊದಲಿಗೆ ಮಗನಾದ ರಮೇಶ ಸೊಸೆಯಾದ ಮಂಜುಳ ಇವರಿಬ್ಬರು. ಅತ್ತೆ , ಮಾವ, ತಂದೆ, ತಾಯಿ ಮನೆ ಮಠ ಅಂತ ಪ್ರೀತಿಯಿಂದ ಮಾತನಾಡಿಸಬೇಕು ಎಂದು ಬರೆದಿದ್ದಾನೆ.

ಜೊತೆಗೆ ತನ್ನ ಹುಡ್ಗಿ ಐಶ್ವರ್ಯ ಬೇಗ ದಪ್ಪ ಆಗಿ, ಪುಷ್ಟಿಯಾಗಿ ಕಾಣುವಂತೆ ಮಾಡು, ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರಿಸುವಂತೆ ದಯೇ ತೋರು, ಜೊತೆಗೆ ಕುಟುಂಬದ ಸಮಸ್ಯೆಯನ್ನು ಬರೆಹರಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾನೆ. ಹುಂಡಿ ಎಣಿಕೆ ವೇಳೆ ಈ ಪತ್ರ ಸಿಕ್ಕಿದ್ದು ಪತ್ರ ಓದಿದವರು ಸುಸ್ತಾಗಿ ಹೋಗಿದ್ದಾರೆ.

- Advertisement -
spot_img

Latest News

error: Content is protected !!