Friday, June 5, 2026
Homeತಾಜಾ ಸುದ್ದಿವ್ಯಕ್ತಿಯನ್ನು ಕೊಲೆ ಮಾಡಿ ಆಟೋ ಸಮೇತ ಸುಟ್ಟ ದುರುಳರು!..

ವ್ಯಕ್ತಿಯನ್ನು ಕೊಲೆ ಮಾಡಿ ಆಟೋ ಸಮೇತ ಸುಟ್ಟ ದುರುಳರು!..

- Advertisement -
- Advertisement -

ಬಂಗಾರಪೇಟೆ:ಇಲ್ಲಿನ ಮಲ್ಲಂಗುರ್ಕಿ ಗ್ರಾಮದ ಬಂಗಾರಪೇಟೆ-ಕೆಜಿಎಫ್ ರೈಲ್ವೆ ಸೇತುವೆ ಬಳಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಆಟೋ ಸಮೇತ ಸುಟ್ಟು ಹಾಕಿರುವ ಘಟನೆ ನಡೆದಿದೆ.

ಪಟ್ಟಣದ ಗಂಗಮ್ಮನಪಾಳ್ಯದ ರಮೇಶ್‌ ಎಂಬುವವರು ಆಟೋ ಓಡಿಸುತ್ತಿದ್ದು ಆತ ಕಾಣೆಯಾಗಿದ್ದಾರೆ, ಶುಕ್ರವಾರ ರಾತ್ರಿ ವೇಳೆ ಆಟೋದಲ್ಲಿಯೇ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ಬೆಂಕಿ ಇಟ್ಟು ಸುಟ್ಟಿದ್ದು ಕೊಲೆಯಾಗಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ರಮೇಶ್‌ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!