Friday, June 5, 2026
Homeತಾಜಾ ಸುದ್ದಿಕಾರ್ಯಾಚರಣೆ ಮಧ್ಯೆ ಚಮಕ್ ನೀಡಿದ ಗಜರಾಜ- ಕೂದಲೆಳೆ ಅಂತರದಲ್ಲಿಪಾರಾದ ಬೈಕ್‌ ಸವಾರ

ಕಾರ್ಯಾಚರಣೆ ಮಧ್ಯೆ ಚಮಕ್ ನೀಡಿದ ಗಜರಾಜ- ಕೂದಲೆಳೆ ಅಂತರದಲ್ಲಿಪಾರಾದ ಬೈಕ್‌ ಸವಾರ

- Advertisement -
- Advertisement -

ಆಲೂರು: ಇಲ್ಲಿನ ಹೊಸ ಕೋಟೆ ಹೋಬಳಿ ಮಠದಕೊಪ್ಪಲು ಗ್ರಾಮದಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬೈಕ್‌ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾಗಿರುವ ಕುರಿತು ವರದಿಯಾಗಿದೆ.

ಕಾರ್ಯಾಚರಣೆವೇಳೆ ಕಾಫಿ ತೋಟದಲ್ಲಿದ್ದ ಒಂಟಿ ಸಲಗವೊಂದು ದಿಢೀರ್‌ ರಸ್ತೆಗೆ ಬಂದಿದೆ. ಈ ವೇಳೆ ಬೈಕ್‌ ಸವಾರ ಆನೆಗೆ ಅಡ್ಡಲಾಗಿ ಬಂದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಬೈಕ್‌ ಸವಾರನಿಗೆ ಹಿಂತಿರುಗಿ ಹೋಗುವಂತೆ ಕೂಗಾಡಿದ್ದಾರೆ. ಆದರೂ, ಯುವಕ ನುಗ್ಗಿ ಬಂದಿದ್ದು, ಆಶ್ಚರ್ಯ ರೀತಿಯಲ್ಲಿ ಪಾರಾಗಿದ್ದಾನೆ. ಸಂತೋಷ್‌ ಆನೆ ದಾಳಿಯಿಂದ ಪಾರಾದ ಯುವಕ.ಈತನು ಆನೆಗೆ ಅತಿ ಸಮೀಪದಲ್ಲಿ ಪಾರಾಗಿ ಹೋಗಿದ್ದ.

- Advertisement -

Latest News

error: Content is protected !!