- Advertisement -
- Advertisement -
ಬೆಳ್ತಂಗಡಿ: ಆರಂಬೋಡಿ ಗ್ರಾಮದ ದಿ.ಭೋಜರಾಜ ಹೆಗ್ಡೆಯವರ ಕುಟುಂಬದ ಮೂಲ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ನಿನ್ನೆ ಸಂಜೆ ಮನೆ ಪಕ್ಕದ ತೆಂಗಿನ ಮರಕ್ಕೆ ಬಡಿದ ಸಿಡಿಲು ಪಿಲ್ಲಂಬು ಮನೆಗೆ ತಾಗಿ ಮನೆಯ ವೈರಿಂಗ್ ಹಾಗೂ ವಿದ್ಯುತ್ ಪಂಪು ಸಂಪೂರ್ಣ ಹಾಳಾಗಿದೆ.
ಮನೆಗೂ ಭಾಗಶಃ ಹಾನಿಯುಂಟಾಗಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಪಿಲ್ಲಂಬು ಕುಟುಂಬದ ಸದಸ್ಯ ನವೀನ್ ಜೈನ್ ತಿಳಿಸಿದ್ದಾರೆ. ಸಿಡಿಲಿನ ರಭಸಕ್ಕೆ ಮನೆಯ ಪಕ್ಕದಲ್ಲಿದ್ದ ಬಾವಿಯ ಕಟ್ಟೆಯ ಕಲ್ಲುಗಳು ತುಂಡು ತುಂಡಾಗಿವೆ.
- Advertisement -