ಬೆಂಗಳೂರು_ಕೊರೊನಾ ಮಾಹಾಮಾರಿಯಿಂದ ಮಾನವ ಕುಲ ಮಾತ್ರವಲ್ಲದೇ ಪ್ರಾಣಿಸಂಕುಲವು ಸಂಕಷ್ಟಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ಪ್ರಾಣಿಗಳನ್ನ ದತ್ತು ಪಡೆದು, ಅದರ ಉಳಿವಿಗೆ ಸಹಕರಿಸಲು ಚಾಲೆಂಜಿಂಗ್ ಸ್ಟಾರ್ ಮನವಿ ಮಾಡಿದ್ರು. ಇದೀಗ ದಚ್ಚುಮನವಿಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಯಲ್ ಸ್ಟಾರ್ ಉಪ್ಪಿ ಸಹ ದಚ್ಚು ಮನವಿಗೆ ಸ್ಪಂದಿಸಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ಪ್ರವಾಸಿ ತಾಣಗಳಿಗೆ ಬೀಗ ಬಿದ್ದಿವೆ.. ಪ್ರತಿದಿನ ಮೃಗಾಲಯಗಳಿಗೆ ದೇಶವಿದೇಶಗಳಿಂದ ಬರುತ್ತಿದ್ದ ಟೂರಿಸ್ಟ್ಗಳು, ಟಿಕೆಟ್ ಹಣದಿಂದ ಬರುತ್ತಿದ್ದ ಆದಾಯ ಎಲ್ಲದಕ್ಕೂ ಬ್ರೇಕ್ ಬಿದ್ದಿದ್ದು, ಪ್ರಾಣಿ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ.
ಪ್ರಾಣಿ ಪ್ರಿಯ ದರ್ಶನ್ ಈ ವಿಚಾರ ತಿಳಿದ ತಕ್ಷಣವೇ ಜನರಲ್ಲಿ ಮನವಿ ಮಾಡಿದ್ರು.. ರಾಜ್ಯದಲ್ಲಿ 9 ಮೃಗಾಲಯಗಳಿವೆ. ಲಾಕ್ಡೌನ್ ಕಾರಣ ಮೃಗಾಲಯಗಳಿಗೆ ಪ್ರವಾಸಿಗರು ಬರುತ್ತಿಲ್ಲ. ಹಾಗಾಗಿ ಪ್ರಾಣಿಗಳ ಆರೈಕೆ, ಮೃಗಾಲಯ ಸಿಬ್ಬಂದಿ ಸಂಬಳ, ಮೃಗಾಲಯ ನಿರ್ವಹಣೆ ಕಷ್ಟವಾಗುತ್ತಿದೆ. ಇಂಥಹಾ ಸಮಯದಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡರೆ ಪ್ರಾಣಿ-ಪಕ್ಷಿಗಳ ಆರೈಕೆ ಮಾಡಿದಂತಾಗುತ್ತದೆ, ಮೃಗಾಲಯ ಸಿಬ್ಬಂದಿಗೂ ಸಹಾಯವಾಗುತ್ತದೆ ನಿಮ್ಮ ಶಕ್ತಿಯನುಸಾರ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ರು.