ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಆರೋಪಿಗಳು ಎನ್ನಲಾದ ಬಿ.ಎಂ.ನರೇಶ್ ಗೌಡ ಮತ್ತು ಶ್ರವಣ್ ಇವರಿಬ್ಬರು ಇಂದು ಎಸ್ಐಟಿ(ವಿಶೇಷ ತನಿಖಾ ತಂಡ) ಮುಂದೆ ಹಾಜರಾಗಿದ್ದಾರೆ.
ನರೇಶ್ ಮತ್ತು ಶ್ರವಣ್ಗೆ ಜೂ.8ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಜಾಮೀನು ಸಿಕ್ಕ ನಾಲ್ಕು ದಿನಕ್ಕೆ ಅಂದರೆ ಜೂ.12ರಂದು ತಮ್ಮ ವಕೀಲರೊಂದಿಗೆ ಆಡುಗೋಡಿ ಟೆಕ್ನಿಕಲ್ ಸೆಂಟರ್ನಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದು, ಸಿಸಿಬಿ ಎಸಿಪಿ ಧರ್ಮೇಂದ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರೂ ಏನೆಲ್ಲ ಬಾಯ್ಬಿಡ್ತಾರೆ ಎಂಬುದು ಕೆಲ ಹೊತ್ತಿನಲ್ಲೇ ಗೊತ್ತಾಗಲಿದೆ.
ಇತ್ತ ನರೇಶ್ ಮತ್ತು ಶ್ರವಣ್ನನ್ನು ಬಂಧಿಸುವಲ್ಲಿ ತನಿಖಾಧಿಕಾರಿಗಳು ಸ್ವತಂತ್ರರು ಎಂದು ಕೋರ್ಟ್ ಹೇಳಿತ್ತು. ಅವಶ್ಯವಿದ್ದಲ್ಲಿ ಬಂಧಿಸುವ ಸಾಧ್ಯತೆ ಇದ್ದು, ಶ್ರವಣ್ ಮತ್ತು ನರೇಶ್ ಕಥೆ ಏನಾಗುತ್ತೆ ಎಂಬ ಕುತೂಹಲ ಹೆಚ್ಚಿದೆ.
ಅಶ್ಲೀಲ ಸಿಡಿ ಬಯಲಾಗುತ್ತಿದ್ದಂತೆ ನರೇಶ್ ಮತ್ತು ಶ್ರವಣ್ ವಿರುದ್ಧ ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್ ಮತ್ತು ಬ್ಯ್ಲಾಕ್ಮೇಲ್ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.