Sunday, May 19, 2024
Homeತಾಜಾ ಸುದ್ದಿಕಳ್ಳತನಕ್ಕೆ ಬಂದು ಪ್ರಾಣ ಕಳೆದುಕೊಂಡ ಕಳ್ಳ

ಕಳ್ಳತನಕ್ಕೆ ಬಂದು ಪ್ರಾಣ ಕಳೆದುಕೊಂಡ ಕಳ್ಳ

spot_img
- Advertisement -
- Advertisement -

ದಾವಣಗೆರೆ : ಕಳ್ಳತನ ಮಾಡಲು ಬಂದಿದ್ದ ಕಳ್ಳನೋರ್ವ ಪರಾರಿಯಾಗುವ ಭರದಲ್ಲಿ ಮನೆ ಮೇಲಿಂದ ಹಾರಿ ಮೃತಪಟ್ಟ ಘಟನೆ ದಾವಣಗೆರೆಯ ಕೆಟಿಜೆ ನಗರದ 3ನೇ ಮುಖ್ಯರಸ್ತೆಯ 13ನೇ
ಕ್ರಾಸ್ ನಲ್ಲಿ ನಡೆದಿದೆ. ಪರಸಪ್ಪ (38) ಮೃತ ದುರ್ದೈವಿ.

ಈತ ಹಾಗೂ ಈತನ ಸಹಚರ ಕಳ್ಳತನ ಮಾಡಲು ಮನೆಯ ಮೇಲೆ ಹತ್ತಿ, ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಮನೆ ಮಾಲೀಕರಿಗೆ ಎಚ್ಚರವಾಗಿದೆ. ಈ ವೇಳೆ ಕಳ್ಳರನ್ನು ನೋಡಿದ ಅವರು ಜೋರಾಗಿ ಕೂಗಿಕೊಂಡಿದ್ದಾರೆ.ಅವರ ಕೂಗಿಗೆ ಅಕ್ಕಪಕ್ಕದ ಮನೆಯವರು ಎಚ್ಚರವಾಗಿದ್ದಾರೆ. ಇದರಿಂದ ಬೆಚ್ಚಿಬಿದ್ದ ಕಳ್ಳರು ಅಲ್ಲಿಂದ ಪರಾರಿ ಆಗಲು ಯತ್ನಿಸಿದ್ದಾರೆ.

ಈ ವೇಳೆ ಕಳ್ಳನೊಬ್ಬ ಮನೆಯ ಮೇಲಿಂದ ಕೆಳಗೆ ಹಾರುವ ವೇಳೆ ತೀವ್ರ ಸ್ವರೂಪದ ಏಟಾಗಿದೆ. ತಕ್ಷಣವೇ ಆತನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಾಯಿತಾದರೂ ಮಾರ್ಗ ಮಧ್ಯೆ ಪ್ರಾಣ ಹಾರಿಹೋಗಿದೆ. ಇನ್ನೋರ್ವ ಕಳ್ಳ ಸ್ಥಳದಿಂದ ಪರಾರಿ ಆಗಿದ್ದಾನೆ.

ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಟಿಜೆ ನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ

- Advertisement -
spot_img

Latest News

error: Content is protected !!