- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಸಾಂಸ್ಕೃತಿಕ ಸಂಘಟನೆ ಸಮೂಹ ಉಜಿರೆ ಇದರ ಆಶ್ರಯದಲ್ಲಿ ಫೆಬ್ರವರಿ 22 ಹಾಗು 23 ರಂದು ಎರಡು ದಿನಗಳ ಕಾಲ ಉಜಿರೆ ಕಾಲೇಜು ಕ್ರೀಡಾಂಗಣದ ಬಳಿ ಇರುವ ವನರಂಗ ಬಯಲು ರಂಗ ಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.
ಫೆಬ್ರವರಿ 22 ರಂದು ಮಂಗಳವಾರ ಸಂಜೆ 6:30 ಕ್ಕೆ ಆಳ್ವಾಸ್ ರಂಗ ಅಧ್ಯನ ಕೇಂದ್ರ ಆಯೋಜಿಸುವ, ಕೆ. ಜಿ. ಕೃಷ್ಣಮೂರ್ತಿಯವರ ರಚನೆಯ ಜೀವನ್ ರಾಮ್ ಸುಳ್ಯ ಇವರ ನಿರ್ದೇಶನದ ಮಕ್ಕಳ ಮಾಯಾಲೋಕ ನಾಟಕ ಪ್ರದರ್ಶಿಸಲಿದ್ದಾರೆ.
ಇನ್ನೂ ಫೆಬ್ರವರಿ 23ರ ಬುಧವಾರ ಸಂಜೆ 6:30 ಕ್ಕೆ ಮಾತ್ರಶ್ರೀ ಹೇಮಾವತಿ ವೀ ಹೆಗ್ಗಡೆಯವರ ಪರಿಕಲ್ಪನೆ ಹಾಗು ಮಾರ್ಗದರ್ಶನದ ಹಾಸ್ಯ ಪ್ರಧಾನ ತುಳುನಾಟಕ, ರಂಗಶಿವ ತಂಡ ರಚನೆಯ, ಸುನೀಲ್ ಶೆಟ್ಟಿ ಕಲ್ಕೊಪ್ಪ ವಿನ್ಯಾಸ ಹಾಗು ನಿರ್ದೇಶನದ ಶ್ರೀ ಕೃಷ್ಣ ಸಂಧಾನೋ ನಾಟಕ ಪ್ರದರ್ಶನಗೊಳ್ಳಲಿದೆ.
- Advertisement -