- Advertisement -
- Advertisement -
ಹೊಸದಿಲ್ಲಿ:ಶಹೀದ್ ದಿವಸ್ ಹಿನ್ನಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಿಗ್ಗೆ ದಿಲ್ಲಿಯ ಗುರುದ್ವಾರ ರಾಕಬ್ ಗಂಜ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.ಯಾವುದೇ ರೀತಿಯ ಪೂರ್ವಯೋಜನೆಗಳಿಲ್ಲದೆ ಪ್ರಧಾನಿ ಭೇಟಿ ನಡೆದಿದ್ದು ಸಾಮಾನ್ಯ ಭಕ್ತರಿಗೆ ಈ ವೇಳೆ ತೊಂದರೆಯಾಗದಂತೆ ಗುರುದ್ವಾರ ಪ್ರವೇಶಕ್ಕೆ ಅವಕಾಶ ನೀಡಲಾಯಿತು.
ಈ ಕುರಿತು ಟ್ವೀಟ್ ಮಾಡಿರುವ ಪಿಎಂ ಮೋದಿಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಪುಣ್ಯ ಶರೀರವನ್ನು ಅಂತ್ಯಸಂಸ್ಕಾರ ಮಾಡಿದ ಐತಿಹಾಸಿಕ ಗುರುದ್ವಾರ ರಕಾಬ್ ಗಂಜ್ ಸಾಹಿಬ್ ನಲ್ಲಿ ಪ್ರಾರ್ಥಿನೆ ಸಲ್ಲಿಸಿದ್ದೇನೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರಂತೆ ನಾನು ಶ್ರೀ ಗುರು ತೇಜ್ ಬಹದ್ದೂರ್ ಅವರ ದಯೆಯಿಂದ ಆಳವಾಗಿ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.
- Advertisement -