Friday, May 10, 2024
Homeತಾಜಾ ಸುದ್ದಿಸುರಕ್ಷಿತ ಹೆರಿಗಾಗಿ ಕೈಲಾಸಕ್ಕೆ ಬನ್ನಿ ಎಂದು ಗರ್ಭಿಣಿಯರನ್ನು ಆಹ್ವಾನಿಸಿದ ನಿತ್ಯಾನಂದ ಸ್ವಾಮಿ

ಸುರಕ್ಷಿತ ಹೆರಿಗಾಗಿ ಕೈಲಾಸಕ್ಕೆ ಬನ್ನಿ ಎಂದು ಗರ್ಭಿಣಿಯರನ್ನು ಆಹ್ವಾನಿಸಿದ ನಿತ್ಯಾನಂದ ಸ್ವಾಮಿ

spot_img
- Advertisement -
- Advertisement -

ಬೆಂಗಳೂರು; ಪದೇ ಪದೇ ಏನಾದರೊಂದು ಹೇಳಿಕೆ ನೀಡಿ ನಗೆಪಾಟಿಲಿಗೆ ಈಡಾಗುವ ಸ್ವಯಂ ಘೋಷಿತ ದೇವ ಮಾನವ ಬಿಡದಿಯ ನಿತ್ಯಾನಂದ ಸ್ವಾಮಿ ಇದೀಗ ಗರ್ಭಿಣಿಯರಿಗೆ ಭರ್ಜರಿ ಆಫರ್ ಒಂದನ್ನು ನೀಡಿದ್ದಾನೆ. ಗರ್ಭಿಣಿಯರು ಯಾವ ದೇಶದಲ್ಲಿದ್ದರೂ ಹೆರಿಗಾಗಿ ಕೈಲಾಸಕ್ಕೆ ಬನ್ನಿ‌ ಎಂದು ಆಹ್ವಾನಿಸಿದ್ದಾನೆ.

ಕೈಲಾಸದಲ್ಲಿ ಶಾಶ್ವತ ಕಾಸ್ಮಿಕ್ ವಿಮಾನ ನಿಲ್ದಾಣ ಮತ್ತು ಇಡೀ ವಿಶ್ವಕ್ಕೆ ಮೀಸಲಾಗುವಂತೆ ಹೆರಿಗೆ ಆಸ್ಪತ್ರೆಯನ್ನು ಮಾಡುವುದಾಗಿ ಹೇಳಿದ್ದಾನೆ.ಈ ಹೆರಿಗೆ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಪ್ರೌಢ ಅಲೌಕಿಕ ಪ್ರಕಾಶಮಾನವಾದ ಶಕ್ತಿಯ ಡಿಎನ್‌ಎ ಅಳವಡಿಸುವುದು ಮತ್ತು ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಕೂಡಾ ನೀಡಲಾಗುತ್ತದೆ ಎಂದು ಹೇಳಿಕೊಂಡಿದ್ದಾನೆ.

ನೀವು ಯಾವುದೇ ದೇಶದಲ್ಲಿರಿ. ಆದರೆ ನಿಮ್ಮ ಮಕ್ಕಳು ವಿಶೇಷ ಚೈತನ್ಯ ಶೀಲರಾಗಬೇಕೆಂದರೆ ಹೆರಿಗೆಗಾಗಿ ಕೈಲಾಸಕ್ಕೆ ಬನ್ನಿ ಎಂದು ವೀಡಿಯೋವೊಂದರಲ್ಲಿ ನಿತ್ಯಾನಂದ ಗರ್ಭಿಣಿಯರಿಗೆ ಆಹ್ವಾನ ನೀಡಿದ್ದಾನೆ.

- Advertisement -
spot_img

Latest News

error: Content is protected !!