ಪ್ರಕಟಣೆ
ಎಲ್ಲಾ ನಿತ್ಯಾನಂದ ಭಕ್ತರಲ್ಲಿ ವಿನಮ್ರ ವಿನಂತಿ
ಶ್ರೀಕ್ಷೇತ್ರ ಗಣೇಶಪುರಿಯಲ್ಲಿ
ಭಗವಾನ್ ಶ್ರೀ ನಿತ್ಯಾನಂದರ ಸಮಾಧಿ ಮಂದಿರದಲ್ಲಿ ಪ್ರತೀವರ್ಷ ಅಚರಿಸುವ ( ವ್ಯಾಸ ಪುರ್ಣಿಮೆ) ಗುರು ಪುರ್ಣಿಮೆ ಹಬ್ಬವನ್ನು ಈ ವರ್ಷ ಕೋವಿಡ್ 19 ಕಾಯಿಲೆ ಹರಡಿದ ಕಾರಣ ಸರ್ಕಾರ ನೀಡಿರುವ ಕಾನೂನು ಪದ್ಧತಿಯಂತೆ ಈ ವರ್ಷ ಆಚರಿಸಲಾಗುವುದು. ಲಾಕ್ಡೌನ್ ಆದೇಶದಂತೆ ದೇವಾಲಯಗಳು ಮುಚ್ಚಿರುವುದರಿಂದ ಭಕ್ತರಿಗೆ ದರ್ಶನದ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಸಂಪ್ರದಾಯದ ಪ್ರಕಾರ ಜುಲೈ 5, 2020 ಭಾನುವಾರ ಬೆಳಿಗ್ಗೆ 4.30 ಗಂಟೆಗೆ ಭಗವಾನ್ ಶ್ರೀ ನಿತ್ಯಾನಂದರ ಮಹಾಭಿಷೇಕ್ ಮತ್ತು ಪೂಜಾ ಅರ್ಚನೆ, ವಿಧಿಗಳನ್ನು ನಿಯಮಿತವಾಗಿ ನೆರವೇರಿಸಲಾಗುವುದು.
ಪೂಜೆಯ ನೇರ ಭಾವಚಿತ್ರವನ್ನು ಸಂಸ್ಥೆಯ ಯೂಟ್ಯೂಬ್ ಚಾನೆಲ್ನಲ್ಲಿ ತೋರಿಸಲಾಗುತ್ತದೆ. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಭಕ್ತರು ಯೂಟ್ಯೂಬ್ ಚಾನೆಲ್ನಲ್ಲಿ ಅವರ ವೀಡಿಯೊವನ್ನು ವೀಕ್ಷಿಸಬಹುದು.
ಆದರೆ, ಕೋವಿಡ್ ದುರಂತದ ಹಿನ್ನೆಲೆಯಲ್ಲಿ ಗಣೇಶಪುರಿ ನಿರ್ಬಂಧಿತ ಪ್ರದೇಶವಾಗಿರುವುದರಿಂದ ಯಾರೂ ಗಣೇಶಪುರಿಗೆ ಭಗವಾನ್ ಶ್ರೀ ನಿತ್ಯಾನಂದರ ಭಕ್ತರು ಬರಬಾರದು ಎಂದು ಮನವಿ ಮಾಡಲಾಗುತ್ತಿದೆ. ನಿಮ್ಮ ಮನೆಯಿಂದ ದೇವರ ದರ್ಶನದ ಹಾಗೂ ಗುರು ಪುರ್ಣಿಮೆಯ ಪೂಜೆಯ ಲಾಭವನ್ನು ಪಡೆಯಬಹುದು ಮತ್ತು ವಿಶ್ವದ ಕಲ್ಯಾಣಕ್ಕಾಗಿ ಭಗವಾನ್ ಶ್ರೀ ನಿತ್ಯಾನಂದರಲ್ಲಿ ಪ್ರಾರ್ಥನೆ ಸಲ್ಲಿಸಿ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.