- Advertisement -
- Advertisement -
ಬೆಂಗಳೂರು: ಇವತ್ತು ರಾತ್ರಿಯೊಳಗೆ ಹೈಕಮಾಂಡ್ ಸಂದೇಶ ಬರುತ್ತದೆ, ಇವತ್ತು ಬರದಿದ್ರೆ ಬೆಳಗ್ಗೆವರೆಗೆ ಕಾಯುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಸಂದೇಶ ಬರದಿದ್ರೆ ಮುಂದೇನು ಮಾಡಬೇಕು ಅಂತ ನಾಳೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಇದುವರೆಗೆ ಹೈಕಮಾಂಡ್ ಸಂದೇಶ ಬಂದಿಲ್ಲ, ಸಂದೇಶ ಬಂದ ನಂತರ ರಾಜೀನಾಮೆ ಕೊಡು ಅಂದ್ರೆ ಕೊಡ್ತೇನೆ, ಮುಂದುವರಿಯಿರಿ ಅಂದರೆ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ. ನಾನು ಕೊನೆಯ ನಿಮಿಷದವರೆಗೂ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ಹೈಕಮಾಂಡ್ ಯಾವಾಗ ರಾಜೀನಾಮೆ ಕೊಡು ಅನ್ನುತ್ತೋ ಆಗ ರಾಜೀನಾಮೆ ಕೊಡುತ್ತೇನೆ ಎಂದೂ ಯಡಿಯೂರಪ್ಪ ಹೇಳಿದ್ದಾರೆ.
ಇದೇ ವೇಳೆ ಜುಲೈ 25 ರ ದಿನಾಂಕ ಯಾರು ನಿಗದಿ ಮಾಡಿದ್ದು ಎಂಬ ಪ್ರಶ್ನೆಗೆ ನಾನು ಈಗ ಯಾವುದೇ ಆ ವಿಚಾರ ಮಾತಾಡಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
- Advertisement -