Friday, April 19, 2024
Homeಕರಾವಳಿಕಾಸರಗೋಡುವರದಕ್ಷಿಣೆಗಾಗಿ ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೆತ್ತವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ ವೈದ್ಯೆ ಶವವಾಗಿ ಪತ್ತೆ

ವರದಕ್ಷಿಣೆಗಾಗಿ ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೆತ್ತವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ ವೈದ್ಯೆ ಶವವಾಗಿ ಪತ್ತೆ

spot_img
- Advertisement -
- Advertisement -

ಕೇರಳ: “ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಲಾಗುತ್ತಿದೆ’ ಎಂದು ತಮ್ಮ ಹೆತ್ತವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದ ಕೇರಳದ 24 ವರ್ಷದ ಮಹಿಳೆ, ನಿನ್ನೆ  ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಘಟನೆ ಇಡೀ ಕೇರಳವನ್ನು ಆಘಾತಕ್ಕೆ ತಳ್ಳಿದೆ.

ಆಯುರ್ವೇದ ವೈದ್ಯ ಪದ್ಧತಿ ವ್ಯಾಸಂಗ ಮಾಡುತ್ತಿದ್ದ ವಿಸ್ಮಯ ನಾಯರ್‌, ವರದಕ್ಷಿಣೆಗಾಗಿ ಪತಿ ಕಿರಣ್‌ಕುಮಾರ್‌ ನನ್ನನ್ನು ಪೀಡಿಸುತ್ತಿದ್ದಾರೆ ಎಂದು ತಮ್ಮ ದೇಹದ ಗಾಯಗಳ ಫೋಟೋ ಸಮೇತ ತಮ್ಮ ಹೆತ್ತವರಿಗೆ ವಾಟ್ಸಾಪ್ ಸಂದೇಶ ರವಾನಿಸಿದ್ದರು.

ಬುಧವಾರ ಕೊಲ್ಲಂನ ಪತಿಯ ಮನೆಯ ಬಾತ್‌ರೂಂನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿಸ್ಮಯ ದೇಹ ಪತ್ತೆಯಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಇವರ ವಿವಾಹ ನೆರವೇರಿತ್ತು. ಆಗ 100 ಚಿನ್ನದ ನಾಣ್ಯ, ಒಂದು ಎಕರೆ ಜಮೀನು ಮತ್ತು 10 ಲಕ್ಷ ರೂ. ಮೌಲ್ಯದ ಕಾರನ್ನು ವರದಕ್ಷಿಣೆಯಾಗಿ ನೀಡಿದ್ದೆವು. ಆದರೂ ಇನ್ನಷ್ಟು ತರುವಂತೆ ಮಗಳಿಗೆ ಕಿರಣ್‌ ಪೀಡಿಸುತ್ತಿದ್ದ ಎಂದು ವಿಸ್ಮಯ ತಂದೆ ತ್ರಿವಿಕ್ರಮ್‌ ನಾಯರ್‌ ಆರೋಪಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ ವಿಜಯನ್‌, “ಬರ್ಬರ ಹಾಗೂ ಅಮಾನವೀಯ ವರದಕ್ಷಿಣೆ ಪಿಡುಗು ನಮ್ಮ ಹೆಣ್ಣುಮಕ್ಕಳನ್ನು ವ್ಯಾಪಾರದ ಸರಕಾಗಿಸಿದೆ. ದಯವಿಟ್ಟು ಅವರನ್ನು ಮನುಷ್ಯರಂತೆ ಕಾಣಿ’ ಎಂದು ಟ್ವೀಟ್‌ ಮಾಡಿದ್ದಾರೆ

- Advertisement -
spot_img

Latest News

error: Content is protected !!