- Advertisement -
- Advertisement -
ಉಡುಪಿ: ಹೊಳೆಯ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬೈಂದೂರಿನ ಮಯ್ಯಡಿ ಸುಮನಾವತಿ ನದಿಯಲ್ಲಿ ನಡೆದಿದೆ.
ಮೃತರನ್ನು ಚಂದ್ರ ನಾಯ್ಕ್(35) ಎಂದು ಗುರುತಿಸಲಾಗಿದೆ. ಚಂದ್ರ ನಾಯ್ಕ ಮನೆ ಸಮೀಪದ ಹೊಳೆಯ ದಡದ ಬಳಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಜೂ.23ರಂದು ಬೆಳಗ್ಗೆ ಕುದ್ರಿಹಿತ್ಲು ಎಂಬಲ್ಲಿನ ಹೊಳೆಯ ದಡದಲ್ಲಿ ಚಂದ್ರ ನಾಯ್ಕ್ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -