Tuesday, May 7, 2024
Homeತಾಜಾ ಸುದ್ದಿಧರ್ಮ ಸಂದೇಶ ನೀಡುವುದನ್ನು ಬಿಟ್ಟು ಅಂತರ್ಧರ್ಮೀಯ ಯುವತಿಯೊಂದಿಗೆ ಪರಾರಿಯಾದ ಚರ್ಚ್ ಪಾದ್ರಿ..!

ಧರ್ಮ ಸಂದೇಶ ನೀಡುವುದನ್ನು ಬಿಟ್ಟು ಅಂತರ್ಧರ್ಮೀಯ ಯುವತಿಯೊಂದಿಗೆ ಪರಾರಿಯಾದ ಚರ್ಚ್ ಪಾದ್ರಿ..!

spot_img
- Advertisement -
- Advertisement -

ಬಳ್ಳಾರಿ: ಚರ್ಚ್ ನಲ್ಲಿ ಧರ್ಮ ಸಂದೇಶ ನೀಡಬೇಕಿದ್ದ ಪಾದ್ರಿಯೊಬ್ಬ ಚರ್ಚ್ ಗೆ ಬಂದಿದ್ದ ಯುವತಿಯನ್ನು ಪುಸಲಾಯಿಸಿ, ಪ್ರೀತಿಯ ನಾಟಕವಾಡಿ ಆಕೆಯ ಜೊತೆ ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

54 ವರ್ಷದ ಪಾದ್ರಿ ರವಿಕುಮಾರ್ ಇದೀಗ 24 ವರ್ಷದ ಯುವತಿಯೊಂದಿಗೆ ಎಸ್ಕೇಪ್ ಆಗಿದ್ದಾನೆ. ಯುವತಿ ಇತ್ತೀಚೆಗೆ ಇಂಜಿನಿಯರಿಂಗ್ ಮುಗಿಸಿದ್ದಳು. ಪದವಿ ನಂತ್ರ ಹೋಂಡಾ ಶೋರೂಮ್‌ನಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲ್ಸ ಮಾಡುತ್ತಿದ್ಳು. ಧರ್ಮ ಬೇರೆಯಾದ್ರೂ ಸ್ನೇಹಿತೆ ಜೊತೆ ಭಾನುವಾರ ಚರ್ಚ್​ಗೆ ಹೋಗುತ್ತಿದ್ದಳು. ಚರ್ಚ್‌ ಗೆ ಬರುತ್ತಿದ್ದ ಯುವತಿಯೊಂದಿಗೆ ಸ್ನೇಹ-ಸಲುಗೆ ಬೆಳೆದು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಎಸ್ಕೇಪಾಗಿದ್ದಾನೆ ಎನ್ನಲಾಗಿದೆ.

ಮಗಳನ್ನು ಹುಡುಕಿಕೊಡುವಂತೆ ಯುವತಿ ಪೋಷಕರು ಇದೀಗ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜೊತೆಗೆ ತಮ್ಮ ಮಗಳ ದಾಖಲಾತಿಗಳನ್ನ ಪಡೆದು ಅಕೌಂಟ್​ನಲ್ಲಿದ್ದ ಹಣ ಕೂಡ ಪಡೆದ್ದಿದ್ದಾನೆಂದು ಆರೋಪಿಸುತ್ತಿದ್ದಾರೆ. ಈಗಾಗ್ಲೇ ಆರೋಪಿ ಇಬ್ಬರನ್ನ ಮದುವೆಯಾಗಿರುವುದಾಗಿ ಗೊತ್ತಾಗಿದೆ. ಹೀಗಾಗಿ ನಮ್ಮ ಮಗಳನ್ನ ನಮಗೆ ಒಪ್ಪಿಸಿ, ಫಾಸ್ಟರ್​ನಿಂದ ಮಗಳನ್ನ ಬಚಾವ್ ಮಾಡಿ ಅಂತಾ ಯುವತಿಯರ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ಹಾಗೂ ಎಸ್​ಪಿಗೆ ದೂರು ನೀಡಿದ್ದಾರೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪಾದ್ರಿ ವಿರುದ್ಧ ಹಲವು ಆರೋಪ ಕೇಳಿಬಂದಿದ್ದು, ಚರ್ಚ್ ಗೆ ಬರುತ್ತಿದ್ದ ಅನೇಕ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬ ದೂರು ಕೂಡ ಕೇಳಿಬಂದಿದೆ.

- Advertisement -
spot_img

Latest News

error: Content is protected !!