- Advertisement -
- Advertisement -
ಬೆಳ್ತಂಗಡಿ: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯು ಮೇ.2 ರಂದು ಪ್ರಾರಂಭಗೊಂಡು ಮೇ 9ರವರೆಗೆ ಜರುಗಲಿದೆ.
ಆ ಪ್ರಯುಕ್ತ ಸೀಮೆಯ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ಜರುಗಿತು. ಮೇ 6 ರಂದು ಬೆಳಿಗ್ಗೆ ಶ್ರೀ ಧನ್ವಂತರಿ ಯಾಗ ಜರುಗಲಿದೆ. ಬೆಳಿಗ್ಗೆ ಕೊಕ್ಕಡ ಜೋಡು ಮಾರ್ಗದಿಂದ ಶ್ರೀ ದೇವಳಕ್ಕೆ ನೂತನ ಕೊಡಿಮರದ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು, ಮೇ 7 ರಂದು ದರ್ಶನ ಬಲಿ, ಬಟ್ಟಲು ಕಾಣಿಕೆ ರಾತ್ರಿ ಮಹಾರಥೋತ್ಸವ ಜರುಗಲಿದ್ದು, ಮೇ 9 ರಂದು ರಾತ್ರಿ ದೈವಗಳಿಗೆ ನರ್ತನ ಸೇವೆ ಶ್ರೀ ಅಣ್ಣಪ್ಪಸ್ವಾಮಿಯ ನೇಮೋತ್ಸವ ನಡೆಯಲಿದೆ.
- Advertisement -