- Advertisement -
- Advertisement -
ಕಾಸರಗೋಡು: ಕಾಡು ಹಂದಿ ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ನಿರ್ಚಾಲು ಸಮೀಪ ನಡೆದಿದೆ.
ಪುದುಕ್ಕೋಳಿಯ ಐತಪ್ಪ ನಾಯ್ಕ್ ( 46) ಮೃತ ದುರ್ದೈವಿ. ಅವರು ಮನೆ ಸಮೀಪದ ಕಾಡಿಗೆ ತೆರಳಿದ್ದ ಸಂದರ್ಭದಲ್ಲಿ ಹಂದಿ ದಾಳಿ ನಡೆಸಿದೆ. ಗಂಭೀರ ಗಾಯಗೊಂಡಿದ್ದ ಐತಪ್ಪ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
- Advertisement -