Sunday, May 19, 2024
Homeತಾಜಾ ಸುದ್ದಿಮಂಗಳೂರು: ವಿದೇಶದಿಂದ ಅಕ್ರಮವಾಗಿ ಆಮದಾಗುತ್ತಿರುವ ಅಡಿಕೆ: ಆಮದು ತಡೆಯುವಂತೆ ಪ್ರಧಾನಿಗೆ ಪತ್ರ ಬರೆದ ವೀರೇಂದ್ರ ಹೆಗ್ಗಡೆ

ಮಂಗಳೂರು: ವಿದೇಶದಿಂದ ಅಕ್ರಮವಾಗಿ ಆಮದಾಗುತ್ತಿರುವ ಅಡಿಕೆ: ಆಮದು ತಡೆಯುವಂತೆ ಪ್ರಧಾನಿಗೆ ಪತ್ರ ಬರೆದ ವೀರೇಂದ್ರ ಹೆಗ್ಗಡೆ

spot_img
- Advertisement -
- Advertisement -

ಮಂಗಳೂರು: ವಿದೇಶದಿಂದ ದೇಶದ ಗಡಿ ಮೂಲಕ ಅಡಕೆಯ ಅಕ್ರಮ ಪ್ರವೇಶ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕ್ಯಾಂಪ್ಕೊ ಅಡಕೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಎಆರ್‌ಡಿಎಫ್‌ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನ ಮಂತ್ರಿಗಳನ್ನು ಪತ್ರ ಮುಖೇನ ಒತ್ತಾಯಿಸಿದ್ದಾರೆ.

ಗುರುವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಭಾರತ ಪ್ರತಿ ವರ್ಷ 15.63 ಲಕ್ಷ ಟನ್‌ ಅಡಕೆ ಉತ್ಪಾದಿಸುತ್ತದೆ. ಅಡಕೆ ಬೆಳೆ ನಮ್ಮ ದೇಶದ ಸುಮಾರು 1.6 ಕೋಟಿ ಜನರ ಬೆನ್ನೆಲುಬಾಗಿದೆ. ಭಾರತ ಅಡಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೂ ಪ್ರತಿ ವರ್ಷ ಸುಮಾರು 24,000 ಟನ್‌ ಅಡಕೆಯನ್ನು ಕಾನೂನುಬದ್ಧವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಹಣಕಾಸು ರಾಜ್ಯ ಸಚಿವ ಪಂಕಜ್‌ ಚೌಧರಿ ಅವರು ಅಡಕೆ ಕಳ್ಳಸಾಗಣೆ ಇನ್ನೂ ಅಸ್ತಿತ್ವದಲ್ಲಿದೆ ಎಂದು ಹೇಳಿರುತ್ತಾರೆ.

ತೆರಿಗೆ ಜಾಲದ ಹೊರಗೆ ವ್ಯಾಪಾರ ಮಾಡುವ ಅಡಕೆಯ ಪ್ರಮಾಣ ಲಭ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಅಡಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ಪ್ರಕಾರ ಶೇ. 15ರಷ್ಟು ಅಡಕೆಯನ್ನು ಮಾತ್ರ ಕ್ಯಾಂಪ್ಕೊ ಮಂಗಳೂರು, ಟಿಎಸ್‌ಎಸ್‌ ಶಿರಸಿ, ಮ್ಯಾಂಮ್ಕೋಸ್‌ ಶಿವಮೊಗ್ಗ ಮತ್ತು ತುಮ್ಕೋಸ್‌ ಚೆನ್ನಗಿರಿ ಮುಂತಾದ ಸಹಕಾರಿ ಸಂಸ್ಥೆಗಳು ವಹಿವಾಟು ನಡೆಸುತ್ತಿವೆ. ಉಳಿದ ಶೇ. 85ರಷ್ಟು ಅಡಕೆಯನ್ನು ಖಾಸಗಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಾರೆ ಎಂದು ವರದಿ ಹೇಳಿದೆ.

ಕಳ್ಳ ಸಾಗಾಣಿಕೆದಾರರ ಇಂತಹ ಅಕ್ರಮ ಚಟುವಟಿಕೆಗಳು ಸ್ಥಳೀಯವಾಗಿ ಬೆಳೆದ ಅಡಕೆಯ ಬೆಲೆಯನ್ನು ಅಸ್ಥಿರಗೊಳಿಸುವುದಲ್ಲದೆ, ಲಕ್ಷಾಂತರ ಅಡಕೆ ರೈತರ ಜೀವನ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿವೆ. ಅಡಕೆ ಮೇಲೆ ಜಿಎಸ್‌ಟಿ ಕೂಡ ಹೇರಿಕೆಯಾಗಿದ್ದು, ಇದು ಕೂಡ ಆದಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರಧಾನ ಮಂತ್ರಿಗಳು ಇಂತಹ ಕಾನೂನು ಬಾಹಿರ ಅಡಕೆ ಆಮದು ಮತ್ತು ಸರಿಯಾದ ಕಾನೂನು ದಾಖಲೆಗಳಿಲ್ಲದೆ ನಡೆಸುವ ಅಕ್ರಮ ಸಾಗಾಟ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಾ. ಹೆಗ್ಗಡೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಅಡಕೆಯ ಸರಕು ಪಟ್ಟಿಯಲ್ಲಿ ಕಡಿಮೆ ದರವನ್ನು ನಮೂದಿಸಿ ಅಡಕೆ ಮಾರಾಟ ಮಾಡುವುದನ್ನು ತಡೆಯಬೇಕು. ನಮ್ಮ ದೇಶದ ಬಿಳಿ ಮತ್ತು ಕೆಂಪು ಅಡಕೆಗಳೆರಡರಲ್ಲೂ ಪರಿಣತರಾಗಿರುವ ಸಹಕಾರಿ ವಲಯದ ಸಮರ್ಥ ನೋಡಲ್‌ ಏಜೆನ್ಸಿ ಕ್ಯಾಂಪ್ಕೊ ಅಥವಾ ಎಆರ್‌ಡಿಎಫ್‌ನ್ನು ಅಂತಹ ಸರಕುಗಳ ಮೌಲ್ಯಮಾಪನ ಮತ್ತು ವರದಿ ನೀಡಲು ಗುರುತಿಸಬಹುದು. ಪ್ರಧಾನ ಮಂತ್ರಿಗಳು ಈ ವಿಷಯಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯಗಳಿಗೆ ಸೂಚನೆ ನೀಡಬೇಕು ಎಂದು ಸ್ವತಃ ಅಡಕೆ ಬೆಳೆಗಾರರಾಗಿರುವ ಡಾ. ವೀರೇಂದ್ರ ಹೆಗ್ಗಡೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!