Friday, May 3, 2024
Homeತಾಜಾ ಸುದ್ದಿಬೆಂಗಳೂರು: ಉಳ್ಳಾಲದ ಮುಲ್ಲಾ ಯು.ಟಿ.ಖಾದರ್ ನಿಜವಾದ ಮೂರ್ಖ- ಖಾದರ್ ಹೇಳಿಕೆಗೆ ಪ್ರತಾಪ್‌ಸಿಂಹ ತಿರುಗೇಟು

ಬೆಂಗಳೂರು: ಉಳ್ಳಾಲದ ಮುಲ್ಲಾ ಯು.ಟಿ.ಖಾದರ್ ನಿಜವಾದ ಮೂರ್ಖ- ಖಾದರ್ ಹೇಳಿಕೆಗೆ ಪ್ರತಾಪ್‌ಸಿಂಹ ತಿರುಗೇಟು

spot_img
- Advertisement -
- Advertisement -

ಬೆಂಗಳೂರು: ಉಳ್ಳಾಲದ ಮುಲ್ಲಾ ಯು.ಟಿ.ಖಾದರ್ ನಿಜವಾದ ಮೂರ್ಖ ಎಂದು ಹೇಳುವ ಮೂಲಕ “ಮೂರ್ಖರ ಪ್ರಶ್ನೆಗೆ ಉತ್ತರ ಸಿಗುತ್ತಾ” ಎಂಬ ಖಾದರ್ ಹೇಳಿಕೆಗೆ ಸೋಮವಾರ ಸಂಸದ ಪ್ರತಾಪ್‌ಸಿಂಹ ತಿರುಗೇಟು ನೀಡಿದ್ದಾರೆ.

ಉಳ್ಳಾಲದ ಮುಲ್ಲಾ ಯು.ಟಿ.ಖಾದರ್ ಗೆ ಮೈಸೂರು ಇತಿಹಾಸದ ಬಗ್ಗೆ ಗೊತ್ತಿಲ್ಲ, ಮಹಾರಾಜರ ವಂಶಕ್ಕೆ ದ್ರೋಹ ಬಗೆದ ಹೈದರಾಲಿಯ ಮಗ ಟಿಪ್ಪು ಅಂತ ಗೊತ್ತಿಲ್ವ? ಎಂದು ಪ್ರಶ್ನಿಸಿದ್ದಾರೆ.

ಇವತ್ತು ಹಿಜಾಬ್ ಕೇಳಿದವರು, ನಾಳೆ ಬುರ್ಕಾ ಹಾಕಿಕೊಂಡು ಬರುತ್ತಾರೆ ಮುಂದೆ ತರಗತಿಯಲ್ಲಿಯೇ ಪ್ರೇಯರ್‌ ರೂಂಗೆ ಆಗ್ರಹಿಸುತ್ತಾರೆ. ಅಮೇಲೆ ದೇಶ ಭಾಗ ಮಾಡಿ ಅಂತಾರೆ. ಎಪ್ಪತ್ತು ವರ್ಷಗಳ ಹಿಂದೆ ಇವರೆಲ್ಲಾ ಇದನ್ನೇ ಮಾಡಿದ್ದು. ಕೋರ್ಟ್ ತೀರ್ಪು ಬರುವವರೆಗೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯವಾರದು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರ ಇದೆಯೊ ಇಲ್ಲವೋ? ಜಗತ್ತಿನ ಎಲ್ಲಾ ದೇಶಗಳಲ್ಲೂ ಸಮವಸ್ತ್ರ ಇದೆ. ಆ ಜಾತಿ ಈ ಜಾತಿ, ಆ ಧರ್ಮ ಈ ಧರ್ಮ ಅಂತ ಭೇದಭಾವ ಇಲ್ಲದೆ ಸಮಾನವಾಗಿ ಜ್ಞಾನಾರ್ಜಾನೆ ಮಾಡಲು ಸಮವಸ್ತ್ರ ಜಾರಿಗೊಳಿಸಿವೆ. ಇದನ್ನ ಅರ್ಥ ಮಾಡಿಕೊಳ್ಳುವ ಕನಿಷ್ಟ ಜ್ಞಾನ ಇಲ್ಲ ಅಂದ್ರೆ ಅದು ಖಾದರ್, ಕಾಂಗ್ರೆಸ್ ಸಮಸ್ಯೆ. ಅದು‌ ನಮ್ಮ ಸಮಸ್ಯೆ ಅಲ್ಲ ಎಂದು ಕಿಡಿಕಾರಿದ್ದಾರೆ.

- Advertisement -
spot_img

Latest News

error: Content is protected !!