- Advertisement -
- Advertisement -
ಉಡುಪಿ: ದ್ವಿಚಕ್ರ ವಾಹನಕ್ಕೆ ನವಿಲು ಡಿಕ್ಕಿಯಾಗಿ ಬೈಕ್ ಸವಾರ ಮತ್ತು ನವಿಲು ಮೃತಪಟ್ಟಿರುವ ಘಟನೆ ಕಾಪು ತಾಲೂಕಿನ ಎರ್ಮಾಳ್ ನಲ್ಲಿ ನಡೆದಿದೆ. ನವಿಲು ಡಿಕ್ಕಿಯಾದ ರಭಸಕ್ಕೆ ರಸ್ತೆಯ ಡಿವೈಡರ್ ಸ್ಕೂಟಿ ಡಿಕ್ಕಿಯಾಗಿದೆ.
ಈ ವೇಳೆ ಸ್ಕೂಟಿ ಚಲಾಯಿಸುತ್ತಿದ್ದ ಅಬ್ದುಲ್ಲಾ ಬೆಳಪು (24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರ ಎರ್ಮಾಳ್ ಎಂಬಲ್ಲಿ ಘಟನೆ ನಡೆದಿದ್ದು, ಪಡುಬಿದ್ರೆಯ ಮೊಬೈಲ್ ಅಂಗಡಿಯಲ್ಲಿ ಅಬ್ದುಲ್ಲಾ ಕೆಲಸ ಮಾಡುತ್ತಿದ್ದರು.
ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ನವಿಲು ಕೂಡಾ ಮೃತಪಟ್ಟಿದೆ. ಪಡುಬಿದ್ರೆ ಸರಕಾರಿ ಆಸ್ಪತ್ರೆಯಲ್ಲಿ ಮೃತ ಅಬ್ದುಲ್ಲಾ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
- Advertisement -