- Advertisement -
- Advertisement -
ಮಂಜೇಶ್ವರ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ದಾಖಲೆಗಳಿಲ್ಲದ 27. 46 ಲಕ್ಷ ರೂ . ವನ್ನು ಡಿವೈ ಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಸದ್ಯ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತನನ್ನು ಕುಂಬ್ಡಾಜೆ ಯ ಶಿಹಾಬುದ್ದೀನ್ (28) ಎಂದು ಗುರುತಿಸಲಾಗಿದೆ.ಡಿ ವೈ ಎಸ್ಪಿ ಯವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.
ತಲಪಾಡಿಯಲ್ಲಿ ಶುಕ್ರವಾರ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆಯಯಲ್ಲಿ, ಈ ಕಾರನ್ನು ಪರಿಶೀಲಿಸಿದಾಗ ಅಕ್ರಮ ಹಣ ಸಾಗಾಟ ಪತ್ತೆಯಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು , ತನಿಖೆಯನ್ನು ಎನ್ಫೋರ್ಸ್ಮೆಂಟ್ ಗೆ ವಹಿಸಲಾಗಿದೆ
- Advertisement -