- Advertisement -
- Advertisement -
ತುಮಕೂರು; ಹೊಸ ಕಾರು ಖರೀದಿಸಿದ ಒಂದೇ ವಾರದಲ್ಲಿ ತುಕಾಲಿ ಸಂತೋಷ್ ಕಾರು ಅಪಘಾತವಾಗಿದೆ. ಕಳೆದ ವಾರವಷ್ಟೇ ತುಕಾಲಿ ಬಿಗ್ ಬಾಸ್ ಶೋನಿಂದ ಬಂದ ಹಣದಲ್ಲಿ ಕಾರು ಖರೀದಿಸಿದ್ದರು. ಇಂದು ಅದೇ ಕಾರು ತುಮಕೂರು ಜಿಲ್ಲೆಯ ಕುಣಿಗಲ್ ಬಳಿ ಅಪಘಾತವಾಗಿದೆ.
ತುಕಾಲಿ ಅವರಕಿಯಾ ಕಾರಿಗೆ ಆಟೋ ಚಾಲಕ ಡಿಕ್ಕಿ ಹೊಡೆದಿದ್ದಾನೆ.ತುಕಾಲಿ ಸಂತು ಕಾರಿನ ಬಲಗಡೆಗೆ ಆಟೋ ಚಾಲಕ ಜಗದೀಶ್ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಆಟೋ ಭಾಗಶಃ ಜಖಂ.ಆಗಿದೆ. ತುಕಾಲಿ ಸಂತು. ತುಮಕೂರು ಕಡೆಯಿಂದ ಕುಣಿಗಲ್ ಕಡೆ ಹೋಗ್ತಿದ್ದರು. ಕುಣಿಗಲ್ ನಿಂದ ಕುರುಡಿಹಳ್ಳಿ ಗೆ ಆಟೋ ಬರುತ್ತಿತ್ತು. ಇನ್ನು ಆಟೋ ಚಾಲಕ ಮದ್ಯ ಸೇವಿಸಿದ್ದ ಎನ್ನಲಾಗಿದೆ.ಘಟನೆಯಲ್ಲಿ ಯಾವುದೇ ಸಾವು ನೋವಾಗಿಲ್ಲ.ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement -