- Advertisement -
- Advertisement -
ತುಮಕೂರು: ಗ್ರಾಮಪಂಚಾಯತಿ ಚುಣಾವಣೆ ರಂಗೇರುತ್ತಿರುವ ಬೆನ್ನಲ್ಲೇ ರಾಜ್ಯದ 28 ಗ್ರಾಮ ಪಂಚಾಯತಿಗಳಿಗೆ ಈ ಬಾರಿಯ ಚುನಾವಣೆ ಕೊನೆಯ ಚುನಾವಣೆ. ಇನ್ನು ಮುಂದೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ 28 ಗ್ರಾಮಗಳು ಚುಣಾವಣೆ ಎದುರಿಸುವುದಿಲ್ಲ. ಮುಂದಿನ 5 ವರ್ಷಗಳಲ್ಲಿ ಈ ಗ್ರಾಮಗಳು ಎತ್ತಿನಹೊಳೆ ನೀರಾವರಿ ಯೋಜನೆಯಿಂದ ಕಣ್ಮರೆಯಾಗಲಿವೆ.
ಈ ಗ್ರಾಮಗಳನ್ನು ಬೈರಗೊಂಡ್ಲು ಅಣೆಕಟ್ಟಿಗೆ ಸರ್ಕಾರ ವಶಪಡಿಸಿಕೊಳ್ಳಲಿದೆ.ಕಣ್ಮರೆಯಾಗುತ್ತಿರುವ ಗ್ರಾಮಗಳಲ್ಲಿ ಸುಂಕದಹಳ್ಳಿ ಪ್ರಮುಖವಾಗಿದೆ. ಈ ಗ್ರಾಮಕ್ಕೆ 300 ವರ್ಷಕ್ಕೂ ಅಧಿಕ ಇತಿಹಾಸವಿದೆ.ಆದರೆ ಇಲ್ಲಿನ ಗ್ರಾಮಸ್ಥರು ನೀರಿನ ಯೋಜನೆ ತಡೆಹಿಡಿದರೆ ತಮ್ಮ ಗ್ರಾಮಗಳು ಉಳಿಯಬಹುದೇನೋ ಎಂಬ ಆಸೆಯಲ್ಲಿ ಎದುರು ನೋಡುತ್ತಿವೆ.
- Advertisement -