Saturday, May 18, 2024
Homeಕರಾವಳಿಉಡುಪಿಉಡುಪಿ: ದೈವದ ಸೊತ್ತುಗಳಿಗೇ ಕನ್ನ ಹಾಕಿದ ಕಳ್ಳರು

ಉಡುಪಿ: ದೈವದ ಸೊತ್ತುಗಳಿಗೇ ಕನ್ನ ಹಾಕಿದ ಕಳ್ಳರು

spot_img
- Advertisement -
- Advertisement -

ಉಡುಪಿ : ದೈವಸ್ಥಾನಕ್ಕೆ ನುಗ್ಗಿ ಕಳ್ಳರು, ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಉಡುಪಿಯ ಹಿರೇಬೆಟ್ಟು ಗ್ರಾಮದ ಬಾಳ್ಕಟ್ಟು ಬೀಡು ಎಂಬಲ್ಲಿ ನಡೆದಿದೆ.

ಬ್ರಹ್ಮಗಿರಿಯ ಪ್ರಥ್ವಿರಾಜ ಶೆಟ್ಟಿ ಎಂಬವರ ಕುಟುಂಬದ ಮನೆಯ ಆವರಣ ದಲ್ಲಿರುವ ದೈವದ ಮನೆಯ ಬಾಗಿಲು ಚಿಲಕವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು, 51 ಸಾವಿರ ರೂ. ಮೌಲ್ಯದ ದೈವದ ಪಂಚ ಲೋಹದ ಹಾಗೂ ಹಿತ್ತಾಳೆಯ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೊಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!