- Advertisement -
- Advertisement -
ಜಮ್ಮು:ಇಲ್ಲಿನ ಕುಪ್ವಾರ ಜಿಲ್ಲೆಯ ಮಛಿಲ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಯನ್ನು ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಮೂವರು ಉಗ್ರರನ್ನು ಸೇನೆ ಕಾರ್ಯಚರಣೆ ನಡೆಸಿ ಹೊಡೆದುರುಳಿಸಿದೆ.ಎಲ್ಒಸಿ ಬಳಿ ಉಗ್ರರ ಚಲನ ವಲನ ಪತ್ತೆಯಾಗಿದ್ದು ಉಗ್ರರು ಸೇನೆ ಮೇಲೆ ದಾಳಿ ನಡೆಸಿದಾಗ , ಸೇನೆಯ ಪ್ರತಿದಾಳಿಯಲ್ಲಿ ಮೂವರ ಹತ್ಯೆ ಮಾಡಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಸೇನೆಯ ಸೇನಾಧಿಕಾರಿ ಸೇರಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.ಕ್ಯಾಪ್ಟನ್ ಅಶುತೋಷ್ ಕುಮಾರ್, , ಹವಾಲ್ದಾರ್ ಪ್ರವೀಣ್ ಕುಮಾರ್, ರೈಫಲ್ಮ್ಯಾನ್ ಮಹೇಶ್ವರ್ ವಿರಮರಣವನ್ನಪ್ಪಿದ್ದು ಮಛಿಲ್ ಸೆಕ್ಟರ್ ಬಳಿ ಕಾರ್ಯಾಚರಣೆ ಮುಂದುವರಿದಿದೆ.
- Advertisement -