Wednesday, May 8, 2024
Homeತಾಜಾ ಸುದ್ದಿನೂರಲ್ಲ ಸಾವಿರ ಜಿಹಾದಿ ಟೆರರಿಸ್ಟ್‌ಗಳಿಗೆ ಸಮ ಒಬ್ಬ ಸಿದ್ದರಾಮಯ್ಯ: ಚರ್ಚೆಗೆ ಗ್ರಾಸವಾಯ್ತು ಹಿಂದೂ ಸಂಘಟನೆ ನಾಯಕಿಯ...

ನೂರಲ್ಲ ಸಾವಿರ ಜಿಹಾದಿ ಟೆರರಿಸ್ಟ್‌ಗಳಿಗೆ ಸಮ ಒಬ್ಬ ಸಿದ್ದರಾಮಯ್ಯ: ಚರ್ಚೆಗೆ ಗ್ರಾಸವಾಯ್ತು ಹಿಂದೂ ಸಂಘಟನೆ ನಾಯಕಿಯ ಹೇಳಿಕೆ 

spot_img
- Advertisement -
- Advertisement -

ವಿಜಯಪುರ: ವಿಜಯಪುರದ ಹಿಂದೂ ಸಂಘಟನೆ ನಾಯಕಿ ಮಂಚಾಲೇಶ್ವರಿ ತೊನಾಶ್ಯಳ ಮಾಡಿರುವ ರೀಲ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಂಚಾಲೇಶ್ವರಿ ತೊನಶ್ಯಾಳ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಪರಶುರಾಮ್ ವಾಗ್ಮೋರೆ ಪರ ಅಭಿಯಾನ ಮಾಡಿದ್ದರು. ವಿಡಿಯೋದಲ್ಲಿ ಮಂಚಾಲೇಶ್ವರಿ ಅವರನ್ನು ಓರ್ವ ಮಹಿಳೆ ಸಿದ್ದರಾಮಯ್ಯ ಅಂದ್ರೆ ಯಾರು ಎಂದು ಕೇಳುತ್ತಾರೆ. ಅದಕ್ಕೆ ಮಂಚಾಲೇಶ್ವರಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ಬೆಂಬಲಿಗರ ಕೆಂಗೆಣ್ಣ್ಣಿಗೆ ಗುರಿಯಾಗಿದ್ದಾರೆ.

ಸಿದ್ದರಾಮಯ್ಯ ಅಂದ್ರೆ ಯಾರು ಗೊತ್ತಿಲ್ಲವಾ? ಸಿದ್ದರಾಮಯ್ಯ ಅಂದ್ರೆ ನೂರಲ್ಲ ಸಾವಿರ ಜಿಹಾದಿ ಟೆರರಿಸ್ಟ್ ಗಳಿಗೆ ಸಮ ಒಬ್ಬ ಸಿದ್ದರಾಮಯ್ಯ ಎಂದು ಮಂಚಾಲೇಶ್ವರಿ ಹೇಳುತ್ತಾರೆ. ಮಂಚಾಲೇಶ್ವರಿ ವಿರುದ್ಧ ಸಿದ್ದರಾಮಯ್ಯ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದು, ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಲಾಗಿದ್ದು, ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು.

ಮಂಚಾಲೇಶ್ವರಿ ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನೆಟ್ಟಿಗರು ಕಮೆಂಟ್ ಮೂಲಕ ಮಂಚಾಲೇಶ್ವರಿ ಹೇಳಿಕೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಎಂದರೆ ನಿಮ್ಮ ಅಭಿಪ್ರಾಯ ಇರಬಹುದು ಮೇಡಂ ಅದು. ನಮ್ಮ ಅಭಿಪ್ರಾಯ ಅದೊಂದು ಅಗಾಧ ಶಕ್ತಿ ದೀನದಲಿತರ ಆಶಾಕಿರಣ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸರಿಯಾಗಿ ಹೇಳಿದ್ದೀರಿ ಅಕ್ಕ ಎಂದು ಹೇಳುವ ಮೂಲಕ ಮಂಚಾಲೇಶ್ವರಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಸಿದ್ದರಾಮಯ್ಯ ಕುರಿತ ಎಮೋಜಿ ಮತ್ತು ಅವರ ಹೇಳಿಕೆಗಳನ್ನು ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಇದುವರೆಗೂ ಮಂಚಾಲೇಶ್ವರಿ ತಮ್ಮ ರೀಲ್ಸ್ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ.

- Advertisement -
spot_img

Latest News

error: Content is protected !!