ಬಿಗ್ ಬಾಸ್ ಅಂದಾಕ್ಷಣ ಮೊದಲಿಗೆ ಕಣ್ಣ ಮುಂದೆ ಬರೋ ಮುಖವೇ ಕಿಚ್ಚ ಸುದೀಪ್ ಅವರದ್ದು. ಸುದೀಪ್ ಹೊತರಾಗಿ ಆ ಜಾಗದಲ್ಲಿ ಇನ್ನ್ಯಾರನ್ನೋ ಹೋಸ್ಟ್ ಆಗಿ ನೋಡೋದು ಸ್ವಲ್ಪ ಕಷ್ಟನಾ ಕಳೆದ 8 ಸೀಸನ್ ಗಳಿಂದ ಕಾರ್ಯಕ್ರಮವನ್ನು ಅದ್ಬುತವಾಗಿ ನಡೆಸಿಕೊಂಡು ಬರುತ್ತಿರುವ ಸುದೀಪ್ ಅವರ ನಿರೂಪಣೆ ಫಿದಾ ಆಹದವರು ಯಾರು ಇಲ್ಲ. ಬಳಸೋ ಭಾಷೆ, ಮಾತನಾಡೋ ಶೈಲಿ ಎಲ್ಲವೂ ವ್ಹಾ ಎನ್ನುವಂತಿರುತ್ತೆ. ಅವರ ಮಾತು ಕೇಳೋದಕ್ಕೆ ಮನೆಯೊಳಗಿನ ಸ್ಪರ್ಧಿಗಳು ಮಾತ್ರವಲ್ಲ ಕರ್ನಾಟಕವೇ ಕಾದು ಕುಳಿತಿರುತ್ತೆ.
ಅದರಲ್ಲೂ ಕಿಚ್ಚ ಸುದೀಪ್ ಇವತ್ತೇನು ಹೇಳ್ತಾರೆ ಕಿಚ್ಚನ ಕೈಯಲ್ಲಿ ಇವತ್ತು ಯಾವ ಸ್ಪರ್ಧಿ ಶಹಬ್ಬಾಸ್ ಗಿರಿ ಪಡೆದುಕೊಳ್ತಾರೆ ಯಾರು ಕಿಚ್ಚನಿಂದ ಬೈಯಿಸಿಕೊಳ್ತಾರೆ, ಅಭಿನಯ ಕಿಚ್ಚ ಇವತ್ತು ಯಾವ ಗೆಟಪ್ ನಲ್ಲಿ ಕಾಣಿಸಿಕೊಳ್ತಾರೆ. ಇದೆಲ್ಲವನ್ನೂ ನೋಡೋದಕ್ಕೆ ಕಾಯುತ್ತಿರುವವರ ಸಂಖ್ಯೆ ಅಷ್ಟಿಷ್ಟಲ್ಲ. 8 ಸೀಸನ್ ಗಳಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿರುವ ಕಿಚ್ಚ ಇದೇ ಮೊದಲ ಬಾರಿಗೆ ಎರಡು ವಾರಗಳಿಂದ ವಾರದ ಕಥೆ ಕಿಚ್ಚ ಜೊತೆ ಎಪಿಸೋಡ್ ನಲ್ಲಿ ಭಾಗಿಯಾಗಿರಲಿಲ್ಲ. ಅನಾರೋಗ್ಯದ ಕಾರಣದಿಂದ ಅವರು ಶೋನಿಂದ ಹೊರಗೆ ಉಳಿದಿದ್ದರು.ಆದ್ರೀಗ ಅವರ ಅನಾರೋಗ್ಯ ಸುಧಾರಿಸಿದ್ದರಿಂದ ಈ ವಾರವಾದ್ರೂ ಕಿಚ್ಚ ಶೋನಲ್ಲಿ ಕಾಣ್ತಿಸಿಕೊಳ್ತಾರೆ ಅಂತಾ ಅಭಿಮಾನಿಗಳು ಹಾಗೇನೇ ಸ್ಪರ್ಧಿಗಳು ಅಂದುಕೊಂಡಿದ್ದರು.ಆದ್ರೀಗ ಅದು ಸುಳ್ಳಾಗಿದೆ.
ಯೆಸ್…ಬಿಗ್ ಬಾಸ್ ಅಭಿಮಾನಿಗಳಿಗೆ ಈ ವಾರ ನಿರಾಸೆ ಕಾದಿದೆ. ಸುದೀಪ್ ಅವರು ಈ ವಾರ ಭಾಗವಹಿಸುವುದಿಲ್ಲ ಎಂದು ವಾಹಿನಿ ತಿಳಿಸಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ ಕಲರ್ಸ್ ವಾಹಿನಿ, ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ನಾಳೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಎಂದು ತಿಳಿಸಿದೆ.
ಆರೋಗ್ಯ ಸಮಸ್ಯೆಯಿಂದ 2 ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳದ ಕಿಚ್ಚ ಸುದೀಪ್ ಅವರು ಇದೇ ಶನಿವಾರ ವೀಕ್ಷರ ಎದುರು ಬರಲಿದ್ದಾರೆ ಎಂಬ ಸುದ್ದಿ ಸಿಕ್ಕಿತ್ತು. ಈ ಸಂಬಂಧ ಟ್ವೀಟ್ ಮಾಡಿ ಸುಳಿವು ನೀಡಿದ್ದ ಅಭಿನಯ ಚಕ್ರವರ್ತಿ, ಆರೋಗ್ಯ ಸುಧಾರಿಸಿದ್ದು, ಈ ವಾರ ಬಿಗ್ ಬಾಸ್ ಎಪಿಸೋಡಿನಲ್ಲಿ ಕಾಣಿಸಿಕೊಳ್ಳಲು ಕಾತುರರಾಗಿದ್ದೇನೆ ಎಂದು ಬರೆದುಕೊಂಡಿದ್ದರು.ಅಲ್ಲದೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇದೇ ವೇಳೆ ಕಿಚ್ಚ, ವೈದ್ಯ ಡಾ. ವೆಂಕಟೇಶ್ ಹಾಗೂ ಡಾ. ವಿನಯ್ ಅವರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದರು.
ನನ್ನ ಆರೋಗ್ಯ ಸುಧಾರಣೆಗಾಗಿ ಹಲವಾರು ಮಂದಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇದರ ವೀಡಿಯೋಗಳು ನನಗೆ ದೊರಕಿವೆ. ಎಲ್ಲರಿಗೂ ಧನ್ಯವಾದ ತಿಳಿಸಿರುವ ಕಿಚ್ಚ ‘ಲವ್ ಯೂ ಆಲ್’ ಇಷ್ಟೇ ಹೇಳಬಲ್ಲೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದರು.
ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ದಾರೆ. ಹೀಗಂತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಬಳಿಕ ಇದೇ ವಿಚಾರವಾಗಿ ಸ್ವತಃ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದರು. ಕಿಚ್ಚನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರೂ ಕೆಲವು ದಿನಗಳ ಕಾಲ ಅವರಿಗೆ ವಿಶ್ರಾಂತಿಯ ಅಗತ್ಯ ಇರೋದರಿಂದ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಕಳೆದ ಎರಡು ವಾರಗಳಲ್ಲಿ ನಡೆದಂತೆ ಈ ವಾರ ಕೂಡ ಕಿಚ್ಚನ ಅನುಪಸ್ಥಿತಿಯಲ್ಲೇ ಕಾರ್ಯಕ್ರಮ ನಡೆಯಲಿದೆ. ಆದ್ರೆ 2 ವಾರಗಳಿಂದ ಕಿಚ್ಚನನ್ನು ನೋಡೋದೆ ಅಭಿಮಾನಿಗಳು ಬೇಸರಗೊಂಡಿರೋದಂತೂ ನಿಜ.