- Advertisement -
- Advertisement -
ಸುಳ್ಯ: ಕೆಲದಿನಗಳ ಹಿಂದೆ ಲಘು ಭೂಕಂಪನದಿಂದ ಹಾನಿಗೊಳಗಾದ ಸುಳ್ಯ ತಾಲೂಕಿನ ವಸಂತ ಭಟ್ ಎಂಬವರ ಮನೆಗೆ ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಇಂದು ಭೇಟಿ ನೀಡಿದರು.
ಈ ವೇಳೆ ಕಂದಾಯ ಸಚಿವ ಅಶೋಕ್ 45 ಸಾವಿರ ರೂ.ನ ಚೆಕ್ ವಿತರಿಸಿದ್ದಲ್ಲದೆ, 5 ಲಕ್ಷ ರೂ.ಗಳ ಪರಿಹಾರ ಒದಗಿಸುವ ಭರವಸೆ ನೀಡಿದರು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮೀ ಜೊತೆಗಿದ್ದರು.
- Advertisement -