- Advertisement -
- Advertisement -
ಉಜಿರೆ: ಪತ್ರಿಕಾ ದಿನದಂದು ರೋಟರಿ ಕ್ಲಬ್ ಬೆಳ್ತಂಗಡಿ ಇವರ ವತಿಯಿಂದ ವಿಶಿಷ್ಟ ರೀತಿಯಲ್ಲಿ ಆಚರಣೆ ನಡೆಸಲಾಯಿತು.
ಹಿರಿಯ ಪತ್ರಕರ್ತ,ಶ್ರೀ ಧ.ಮ.ಕಾಲೇಜು ಉಜಿರೆ ಯ ನಿವೃತ ಉಪನ್ಯಾಸಕ ನಾ ವುಜಿರೆ ( ನಾಗರಾಜ ಪೂವಣಿ) ಇವರನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸುವಮೂಲಕ ದಿನಾಚರಣೆಗೆ ರೂಪ ನೀಡಿದೆ.
ಈ ಸಂಧರ್ಭ ನಾ,ವುಜಿರೆ ಅವರ ಪತ್ನಿ ಸರಸ್ವತಿ ಎನ್. ರಾಜ್ ಅವರಿಗೂ ಜೊತೆಯಾಗಿ ಗೌರವ ಸಮರ್ಪಿಸಲಾಯಿತು.
ರೋಟರಿ ಕ್ಲಬ್ನ ಅಧ್ಯಕ್ಷ ರೊ.ಬಿ.ಕೆ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ., ಡಿ.ಎಂ ಗೌಡ, ರಾಜಶ್ರೀ, ಗಾಯತ್ರಿ, ಡಾ.ದೀಪಾಲಿ ಡೋಂಗ್ರೆ ಹಾಗೂ ನಾ, ವುಜಿರೆ ಅವರ ಸಹೋದ್ಯೋಗಿ ನಿವೃತ ಉಪನ್ಯಾಸಕ ಕೆ.ವಿಷ್ಣುಮೂರ್ತಿ ಭಟ್ ಅವರುಗಳು ಉಪಸ್ಥಿತರಿದ್ದರು.
- Advertisement -