Wednesday, May 8, 2024
Homeತಾಜಾ ಸುದ್ದಿ"ಆ ಯಮ್ಮ ಏನೂ ಕೆಲಸ ಮಾಡಲ್ಲ" ಅಂದ್ರು ಸಂಸದ ಪ್ರತಾಪ್​ ಸಿಂಹ- ಸಮರ್ಪಕವೇ ಸುಮಲತಾ ವಿರುದ್ಧದ...

“ಆ ಯಮ್ಮ ಏನೂ ಕೆಲಸ ಮಾಡಲ್ಲ” ಅಂದ್ರು ಸಂಸದ ಪ್ರತಾಪ್​ ಸಿಂಹ- ಸಮರ್ಪಕವೇ ಸುಮಲತಾ ವಿರುದ್ಧದ ಪ್ರತಾಪ್​ ಪ್ರತಾಪ?

spot_img
- Advertisement -
- Advertisement -

ಮಂಡ್ಯ:ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಪ್ರತಾಪ್​ ಸಿಂಹ ಮಾತುಗಳು ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ತಾಲೂಕಿನ ಯಲಿಯೂರು ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಅಧಿಕಾರಿ ಜತೆ ಫೋನ್​ನಲ್ಲಿ ಮಾತನಾಡುವಾಗ ಈ ಪ್ರಸಂಗ ಜರುಗಿದೆ.ಸಂಸದೆ ಸುಮಲತಾ ಅಂಬರೀಷ್​ ನಡೆಯನ್ನು ಟೀಕಿಸಿ ಮೈಸೂರು-ಕೊಡುಗು ಸಂಸದ ಪ್ರತಾಪ್​ ಸಿಂಹ ಮಾತನಾಡಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ಕಾಮಗಾರಿಯ ಬಗ್ಗೆ ಅಧಿಕಾರಿಯೊಬ್ಬರ ಜತೆ ಫೋನ್‌ನಲ್ಲಿ ಮಾತನಾಡುವ ವೇಳೆ ಸುಮಲತಾ ವಿರುದ್ಧ ಅಧಿಕಾರಿ ದೂರು ಹೇಳಿದಾಗ ಅವರ ವಿರುದ್ಧ ಪ್ರತಾಪ್​ ಸಿಂಹ ಮಾತನಾಡಿದ್ದಾರೆ.”ದೇವೇಗೌಡರ ಕುಟುಂಬದವರನ್ನು ಸೋಲಿಸಲು ಸುಮಲತಾ ಅವರನ್ನು ಗೆಲ್ಲಿಸಿದ್ದಾರಷ್ಟೇ. ಮಂಡ್ಯದಲ್ಲಿ ಒಂದು ಕೆಲಸ ಮಾಡುವುದಕ್ಕೂ ಬಿಡುತ್ತಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ, ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ” ಎಂದು ಟೀಕಾ ಪ್ರಹಾರ ನಡೆಸಿರುವ ಪ್ರತಾಪ್ ನಡೆ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

- Advertisement -
spot_img

Latest News

error: Content is protected !!