- Advertisement -
- Advertisement -
ಬದಿಯಡ್ಕ: ತುಳು ಲಿಪಿ ಸಂಶೋಧಕ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಅವರ ಜನ್ಮದಿನದ ಪ್ರಯುಕ್ತ ಅ.10ರಂದು ತುಳು ಲಿಪಿ ದಿನ ಆಚರಿಸಲು ನಿರ್ಧರಿಸಲಾಗಿದೆ.
ಕಾಸರಗೋಡಿನ ಜೈ ತುಳುನಾಡು ಸಂಘಟನೆಯ ಆಶ್ರಯದಲ್ಲಿ ಅ.10 ಮಂಗಳವಾರದಂದು ಮಧ್ಯಾಹ್ನ 3ಗಂಟೆಗೆ ನೀರ್ಚಾಲು ಮಹಾಜನ ಶಾಲೆಯಲ್ಲಿ ತುಳು ಲಿಪಿ ದಿನ ಆಚರಿಸಲಾಗುವುದು.
ಕಾರ್ಯಕ್ರಮವನ್ನು ಜಯದೇವ ಖಂಡಿಗೆ ಉದ್ಘಾಟಿಸಲಿದ್ದು, ಕುಶಲಾಕ್ಷಿ ವಿ.ಕುಲಾಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಶಿಕ್ಷಕ ಎಂ.ಕೆ.ಶಿವಪ್ರಕಾಶ್, ವಿಜಯರಾಜ ಪುಣಿಂಚಿತ್ತಾಯ, ಪ್ರೊ.ಎ.ಶ್ರೀನಾಥ್, ಉಮೇಶ್ ಸಾಲಿಯಾನ್ ಕಿರಣ್ ತುಲುವೆ ಭಾಗವಹಿಸುವರು. ವಿದ್ಯಾಲಕ್ಷ್ಮಿ ಉಪನ್ಯಾಸ ನೀಡುವರು.
- Advertisement -