ಚಿಕ್ಕಮಗಳೂರು : ಕೆಜಿಎಫ್ 2 ಚಿತ್ರ ಈಗಾಗಲೇ ವಿಶ್ವದಾದ್ಯಂತ ರಿಲೀಸಿಗೆ ತಯಾರಿ ನಡೆಸಿದೆ. ಯಶ್ ಅಭಿಮಾನಿಗಳು ಕೂಡ ಈಗಾಗಲೇ ಟಿಕೆಟ್ ಕಾಯ್ದಿರಿಸುವಲ್ಲಿ ನಿರತರಾಗಿದ್ದಾರೆ.ವಿಶ್ವದ್ಯಾಂತ ಸಿನಿಮಾ ಬಿಡುಗಡೆಗೆ ವಿತರಕರು ಮುಂದಾಗಿದ್ದರೂ ಕಾಫಿನಾಡಿನಲ್ಲಿ ಕೆಜಿಎಫ್ 2 ಬಿಡುಗಡೆ ಆಗುತ್ತಿಲ್ಲ. ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು ಪ್ರತಿಭಟನೆ ಹಾದಿಯನ್ನು ಹಿಡಿದ್ದಾರೆ.
ನಾಳೆ ರಾಜ್ಯಾದ್ಯಂತ ಬಹುನಿರೀಕ್ಷಿತ ಕೆಜಿಎಫ್ 2 ಬಿಡುಗಡೆಯಾಗುತ್ತಿದ್ದರೂ ಚಿಕ್ಕಮಗಳೂರು ನಗರದಲ್ಲಿ ಬಿಡುಗಡೆಯಾಗುತ್ತಿಲ್ಲವಾದ್ದರಿಂದ ಯಶ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.ನಗರದ ಎಂಎನ್ಸಿ ಸರ್ಕಲ್ ನಲ್ಲಿರುವ ನಾಗಲಕ್ಷ್ಮಿ ಥಿಯೇಟರ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಥಿಯೇಟರ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎನ್ ಎಮ್ ಸಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಭಿಯಾನಿಗಳನ್ನು ಇದೇ ರಸ್ತೆಯಲ್ಲಿ ಹೋಗುತ್ತಿದ್ದಶಾಸಕ ಸಿ.ಟಿ ರವಿ ನೋಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು.ಸಿನಿಮಾ ಬಿಡುಗಡೆ ಆಗದಿರುವ ಬಗ್ಗೆ ಚಿತ್ರಮಂದಿರದ ಮಾಲೀಕರ ಜತೆ ಚರ್ಚೆ ನಡೆಸಿದರು.ತದನಂತರ ಅಭಿಮಾನಿಗಳಿಗೆ ನಟ ಯಶ್ ಹಾಗೂ ವಿತರಕರ ಜತೆ ಮಾತನಾಡುವ ಭರವಸೆ ನೀಡಿದರು. ಯಶ್ ನಟನೆಯ ಸಿನಿಮಾವನ್ನು ಮೊದಲ ದಿನವೇ ನೋಡಬೇಕು ಹಾಗಾಗಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲೇ ಬೇಕೆಂದು ಪಟ್ಟು ಹಿಡಿದಿದ್ದ ಅಭಿಮಾನಿಗಳನ್ನು ಮನವೊಲಿಸಿ ಪರಿಣಾಮ ಪ್ರತಿಭಟನೆಯನ್ನು ಅಭಿಮಾನಿಗಳನ್ನು ಕೈಬಿಟ್ಟರು.