- Advertisement -
- Advertisement -
ಕಾಸರಗೋಡು; ಫ್ಲ್ಯಾಟ್ ನಲ್ಲಿ ಯುವಕನನ್ನು ಕೊಲೆ ಮಾಡಿ ಮೃತದೇಹ ಬಚ್ಚಿಟ್ಟಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಮಂಜೇಶ್ವರದಲ್ಲಿ ನಡೆದಿದೆ.ಕೋಝಿಕ್ಕೋಡ್ ಕೋಳಾರಿಕಂಡಿಯ ಅರ್ಷಾದ್(27) ಹಾಗೂ ಕೊಯಿಲಾಂಡಿಯ ಅಶ್ವಥ್(23)ಬಂಧಿತರು.
ಕೊಚ್ಚಿಯ ಹೊಟೇಲೊಂದರ ಸಿಬ್ಬಂದಿ,ಮಲಪ್ಪುರಂ ವೆಂಡೂರು ಅಂಬಲಪ್ಪಾಡಿ ಪುತ್ತನ್ಪುರ ವೀಟಿಲ್ ರಾಮಕೃಷ್ಣನ್ ಅವರ ಪುತ್ರ ಸಜೀವ್ ಕೃಷ್ಣನ್(22) ಅವರನ್ನು ಇವರು ಕೊಲೆ ಮಾಡಿ ಎರ್ನಾಕುಳಂ ಕಾಕನಾಡು ಪಾರ್ಕ್ಗೆ ಸಮೀಪದ ಇಡಚ್ಚಿರ ವಲ್ಯಾಟ್ ದೇವಸ್ಥಾನದ ಬಳಿಯ ಬಸೋನಿಯ ಫ್ಲ್ಯಾಟ್ನ ಹದಿನಾರನೇ ಮಹಡಿಯಲ್ಲಿ ಬಚ್ಚಿಟ್ಟಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
- Advertisement -