- Advertisement -
- Advertisement -
ಉಡುಪಿ : ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಕೊಡಂಕೂರು ನಿವಾಸಿ ಆರ್.ಟಿ.ಓ ಏಜೆಂಟ್ ಆಗಿದ್ದ ಆಶೋಕ್ ಸುವರ್ಣ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಇಂದು ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.
ಆಶೋಕ್ ಸುವರ್ಣ ಅವರು ಆದಿಉಡುಪಿ ಪರಿಸರದಲ್ಲಿ ಆರ್.ಟಿ.ಓ ಏಜೆಂಟ್ ಆಗಿ ತುಂಬಾ ಹೆಸರುವಾಸಿಯಾಗಿದ್ದರು.
ಎರಡು ದಿನಗಳ ಹಿಂದೆ ಮಾಬುಕಳ ಸೇತುವೆ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದರು. ಆದರೆ ಈಗ ಅವರು ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -