- Advertisement -
- Advertisement -
ಕಡಬ : ಆಗಸ್ಟ್ 21 ರಂದು ಮಂಗಳೂರಿನ ಐಸ್ ಕ್ರೀಮ್ ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳಿದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ದೇವಸ್ಯ ನಿವಾಸಿ ತೀರ್ಥಲತಾ ಎಂಬ ಯುವತಿ ನಾಪತ್ತೆಯಾಗಿದ್ದಳು. ಇದೀಗ ಈ ಯುವತಿ ಬಳ್ಳಾರಿಯ ಹೊಸಪೇಟೆಯಲ್ಲಿ ಪತ್ತೆಯಾಗಿದ್ದಾಳೆ.
ನಿನ್ನೆ ಹೊಸಪೇಟೆಯಲ್ಲಿ ಠಾಣಾ ಸಿಬ್ಬಂದಿ ಹೆಚ್ ಸಿ ರಮೇಶ್ ಲಂಬಾಣಿ ಅವರು ತೀರ್ಥಲತಾ ಆಕೆಯ ಪ್ರಿಯಕರ ಜಯರಾಜ್ ನೊಂದಿಗಿರೋದನ್ನು ಪತ್ತೆ ಹಚ್ಚಿದ್ದಾರೆ. ತೀರ್ಥಲತಾ ಹಾಗೂ ಜಯರಾಜ್ ವಿವಾಹವಾಗಿದ್ದು, ಇಬ್ಬರನ್ನೂ ಠಾಣೆಗೆ ಕರೆ ತಂದು, ಮನೆಯವರ ಹೇಳಿಕೆ ಪಡೆದು ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
- Advertisement -