- Advertisement -
- Advertisement -
ಕುಂದಾಪುರ ರಸ್ತೆಯಿಂದ ಬ್ರಹ್ಮಾವರ ರಸ್ತೆಗೆ ಸಂಪರ್ಕ ಕಲ್ಪಿಸುವ ಚಾರ ಸಾಯಿನಗರ ಹುಯ್ಯಾಲುಜಡ್ಡು ರಸ್ತೆ ಹೊಂಡಗುಂಡಿಗಳಿಂದ ಕೂಡಿತ್ತು ಹಾಗು ಕೆಸರುಮಯವಾಗಿತ್ತು ಇದರಿಂದ ಈ ಮಾರ್ಗದಲ್ಲಿ ಸಂಚರಿಸುವುದು ತುಂಬಾ ಕಷ್ಟವಾಗಿತ್ತು.
ಚಾರ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ನಾಯ್ಕ್ ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿಸಿದ್ದರು. ‘ಹುಯ್ಯಾಲುಜಡ್ಡು ಸಾಯಿನಗರ ರಸ್ತೆಯಲ್ಲಿ ಸಂಚಾರವೇ ಕಷ್ಟವಾಗಿತ್ತು. ಸಕಾಲದಲ್ಲಿ ರಸ್ತೆಯನ್ನು ದುರಸ್ತಿ ಮಾಡಿಕೊಟ್ಟು ಚಾರ ಕೃಷ್ಣ ನಾಯ್ಕ್ ಜನರಿಗೆ ಸ್ಪಂದಿಸಿದ್ದಾರೆ.
ಸರ್ಕಾರ ಬೇಗನೇ ಡಾಂಬಾರು ಮಾಡಿಸಬೇಕು ಎಂದು ಕೃಷ್ಣಮೂರ್ತಿ ಭಂಡಾರಿ ಮತ್ತು ಪ್ರದೀಪ್ ಮತ್ತಿತರರು ಒತ್ತಾಯಿಸಿದ್ದಾರೆ.
- Advertisement -