- Advertisement -
- Advertisement -
ಉಳ್ಳಾಲ: ಕೊರೋನಾ ಲಾಕ್ ಡೌನ್ ನಿಂದಾಗಿ ಮನೆಯಿಂದಲೇ ಆಫೀಸ್ ಕೆಲಸ ನಿರ್ವಹಿಸುತ್ತಿದ್ದ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಕೆಲಸದಲ್ಲಿರುವ ಸಂದರ್ಭದಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಮಂಗಳೂರು ಹೊರವಲಯದ ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರ ಬಳಿ ಮನೆಯ ವಾಸುದೇವ ಪ್ರಭು ಮತ್ತು ತಾರಾಮತಿ ದಂಪತಿ 2ನೇ ಪುತ್ರ ಶ್ರೀಕಾಂತ್ ಪ್ರಭು (40) ನಿಧನ ಹೊಂದಿದರು. ಶ್ರೀಕಾಂತ್ ಪ್ರಭು ವಿವಾಹಿತರಾಗಿದ್ದು, ಪತ್ನಿ ಹಾಗೂ ಮಗಳು ಇದ್ದಾರೆ.
ಲಾಕ್ಡೌನ್ ಬಳಿಕ ಬೆಂಗಳೂರಿನಿಂದ ಊರಿಗೆ ವಾಪಸಾಗಿದ್ದ ಶ್ರೀಕಾಂತ್, ಮನೆಯಲ್ಲಿದ್ದುಕೊಂಡೇ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಕೆಲಸದಲ್ಲಿರುವ ಸಂದರ್ಭದಲ್ಲೇ ಹೃದಯಾಘಾತವಾಗಿದೆ.
- Advertisement -