Friday, May 10, 2024
Homeತಾಜಾ ಸುದ್ದಿಯಾರಿಗೆ ಒಲಿಯುತ್ತೆ ಕರ್ನಾಟಕದ ಸಿಎಂ ಗಾದಿ?; ಸಕ್ಕರೆ ನಾಡಿನ ಶ್ವಾನ ನುಡಿದ ಭವಿಷ್ಯವೇನು?

ಯಾರಿಗೆ ಒಲಿಯುತ್ತೆ ಕರ್ನಾಟಕದ ಸಿಎಂ ಗಾದಿ?; ಸಕ್ಕರೆ ನಾಡಿನ ಶ್ವಾನ ನುಡಿದ ಭವಿಷ್ಯವೇನು?

spot_img
- Advertisement -
- Advertisement -

ಮಂಡ್ಯ; ರಾಜ್ಯ ಸಿಎಂ ಯಾರಾಗ್ತಾರೆ ಎಂಬ ಚರ್ಚೆಗಳು ಜೋರಾಗುತ್ತಿರುವ ಬೆನ್ನಲ್ಲೇ ಮಂಡ್ಯದಲ್ಲಿ ನಾಯಿಯೊಂದು ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಅಂತಾ ಭವಿಷ್ಯ ನುಡಿದಿದೆ.

ಮಂಡ್ಯದ ಅಶೋಕನಗರದ ನಾಯಿಯೊಂದು ಕರ್ನಾಟಕದ ಭಾವಿ ಸಿಎಂ ಯಾರೆಂದು ಹೇಳಿದೆ. ಅಂದ್ಹಾಗೆ, ಎರಡು ವರ್ಷಗಳಿಂದ ಈ ನಾಯಿಯ ಭವಿಷ್ಯವಾಣಿಗಳು ನಿಜವಾಗುತ್ತಿದೆ ಅಂತೆ. ಅದ್ರಂತೆ, ಸದ್ಯ ಬಸವರಾಜ ಬೊಮ್ಮಾಯಿ, ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಮೂರು ಫೋಟೋಗಳನ್ನ ನಾಯಿಯ ಮುಂದೆ ಇಡಲಾಗಿತ್ತು. ಆ ಸಮಯದಲ್ಲಿ ನಾಯಿ ಎಚ್. ಡಿ.ಕುಮಾರಸ್ವಾಮಿ ಅವರ ಫೋಟೋವನ್ನ ಬಾಯಲ್ಲಿ ಕಚ್ಚಿಕೊಂಡು ಅವರೇ ಭಾವಿ ಸಿಎಂ ಎಂದು ಭವಿಷ್ಯ ನುಡಿದಿದೆ.

 ಹಾಗಾಗಿ ನಾಯಿ ಹೇಳಿದ್ದು ನಿಜವಾ ಅನ್ನೋ ಕುತೂಹಲ ಜಾಸ್ತಿಯಾಗಿದ್ದು ಕೆಲವೇ ದಿನಗಳಲ್ಲಿ ಕುತೂಹಲಕ್ಕೆ ತೆರೆ ಬೀಳಲಿದೆ.

- Advertisement -
spot_img

Latest News

error: Content is protected !!