- Advertisement -
- Advertisement -
ಕಾಪು: ಕಳೆದ ಹಲವು ದಿನಗಳಿಂದ ಭಾರೀ ಮಳೆ ಸುರಿದಿದ್ದು, ಸಾಕಷ್ಟು ಅನಾಹುತಗಳೇ ಆಗಿವೆ. ಸಾಕಷ್ಟು ಕಡೆ ಕಡಲ್ಕೊರೆತ ಕೂಡಾ ಆಗಿದೆ. ಇವತ್ತು ಕಡಲ್ಕೊರೆತ ಆದ ಪ್ರದೇಶಗಳಿಗೆ ಶಾಸಲ ಲಾಲಾಜಿ ಮೆಂಡನ್ ಭೇಟಿ ಕೊಟ್ಟಿದ್ದಾರೆ. ಕಾಪು ಪುರಸಭಾ ವ್ಯಾಪ್ತಿಯ ಕೈಪುಂಜಾಲು, ಪೊಲಿಪು ಭಾಗದ ಕಡಲ್ಕೊರೆತಗೊಂಡ ಪ್ರದೇಶಗಳಿಗೆ ಶಾಸಕರು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಶಾಸಕರ ಜೊತೆ ಅಧಿಕಾರಿಗಳೂ ಜೊತೆಗಿದ್ದು ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಶುರು ಮಾಡಿ ಅಂತ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು
- Advertisement -