- Advertisement -
- Advertisement -
ಬೆಳ್ತಂಗಡಿ:ಜಾನಪದ ಕಲಾವಿದ ಬಹುಮುಖ ಪ್ರತಿಭೆ ಲಾಯಿಲ ಗ್ರಾಮದ ಹೆಚ್ ಕೃಷ್ಣಯ್ಯ ಅವರು ಫೆ 20 ರಂದು ಸಂಜೆ ಅಲ್ಪಕಾಲದ ಅನಾರೋಗ್ಯ ಹಿನ್ನೆಲೆ ಮನೆಯಲ್ಲಿ ನಿಧನರಾಗಿದ್ದಾರೆ.
ಲಾಯಿಲ ಗ್ರಾಮದ ಉತ್ಸಾಹಿ ಯುವಕ ಮಂಡಲವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಇವರು ಆಕಾಶವಾಣಿ , ದೂರದರ್ಶನದಲ್ಲೂ ಹಲವಾರೂ ಕಾರ್ಯಕ್ರಮ ನೀಡುತ್ತಿದ್ದರು. ಜನಪದ ಎಲ್ಲಾ ಕಲಾ ಪ್ರಕಾರಗಳು , ಲಾವಣಿ, ರಂಗಗೀತೆ , ಭಾವಗೀತೆ , ಭಕ್ತಿಗೀತೆ , ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಶಾಲಾ ದಿನಗಳಲ್ಲಿ ರೆಡಿಯೋ ಮೂಲಕ ಹಾಡುಗಳನ್ನು ಕಲಿತ ಇವರು ರಾಜ್ಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಇವರಿಗೆ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದೆ. ಇವರ ನಿಧನಕ್ಕೆ ಹಲವಾರೂ ಮಂದಿ ಸಂತಾಪ ಸೂಚಿಸಿದ್ದಾರೆ.
- Advertisement -