Saturday, May 18, 2024
Homeಕರಾವಳಿಬೆಳ್ತಂಗಡಿ; ಜಾನಪದ ಕಲಾವಿದ ಹೆಚ್  ಕೃಷ್ಣಯ್ಯ ಲಾಯಿಲ ವಿಧಿವಶ

ಬೆಳ್ತಂಗಡಿ; ಜಾನಪದ ಕಲಾವಿದ ಹೆಚ್  ಕೃಷ್ಣಯ್ಯ ಲಾಯಿಲ ವಿಧಿವಶ

spot_img
- Advertisement -
- Advertisement -

ಬೆಳ್ತಂಗಡಿ:ಜಾನಪದ ಕಲಾವಿದ ಬಹುಮುಖ ಪ್ರತಿಭೆ ಲಾಯಿಲ ಗ್ರಾಮದ  ಹೆಚ್ ಕೃಷ್ಣಯ್ಯ  ಅವರು ಫೆ 20 ರಂದು ಸಂಜೆ  ಅಲ್ಪಕಾಲದ ಅನಾರೋಗ್ಯ ಹಿನ್ನೆಲೆ ಮನೆಯಲ್ಲಿ‌ ನಿಧನರಾಗಿದ್ದಾರೆ.

ಲಾಯಿಲ ಗ್ರಾಮದ ಉತ್ಸಾಹಿ ಯುವಕ ಮಂಡಲವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಇವರು ಆಕಾಶವಾಣಿ , ದೂರದರ್ಶನದಲ್ಲೂ  ಹಲವಾರೂ ಕಾರ್ಯಕ್ರಮ ನೀಡುತ್ತಿದ್ದರು. ಜನಪದ ಎಲ್ಲಾ ಕಲಾ ಪ್ರಕಾರಗಳು , ಲಾವಣಿ, ರಂಗಗೀತೆ , ಭಾವಗೀತೆ , ಭಕ್ತಿಗೀತೆ , ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಶಾಲಾ ದಿನಗಳಲ್ಲಿ ರೆಡಿಯೋ ಮೂಲಕ ಹಾಡುಗಳನ್ನು ಕಲಿತ ಇವರು ರಾಜ್ಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಇವರಿಗೆ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದೆ. ಇವರ ನಿಧನಕ್ಕೆ ಹಲವಾರೂ ಮಂದಿ ಸಂತಾಪ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!