Monday, April 29, 2024
Homeಕರಾವಳಿಕಾಸರಗೋಡಿನಲ್ಲಿ ಯುವಕನೋರ್ವನ ಅಪಹರಣ; ನಗದು ದೋಚಿ, ಮಾರಕಾಸ್ತ್ರಗಳಿಂದ ಹಲ್ಲೆಗೈದ ಆರೋಪಿಯ ಬಂಧನ

ಕಾಸರಗೋಡಿನಲ್ಲಿ ಯುವಕನೋರ್ವನ ಅಪಹರಣ; ನಗದು ದೋಚಿ, ಮಾರಕಾಸ್ತ್ರಗಳಿಂದ ಹಲ್ಲೆಗೈದ ಆರೋಪಿಯ ಬಂಧನ

spot_img
- Advertisement -
- Advertisement -

ಕಾಸರಗೋಡು: ಪಿಲಿಕ್ಕೋಡೆ ಮಡಿವಯಲಿ ಎಂಬಲ್ಲಿ ಯುವಕನೋರ್ವನನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆಗೈದು ನಗದು ದೋಚಿ ಪರಾರಿಯಾದ ಆರೋಪಿಗಳನ್ನು ಬಂಧಿಸುವಲ್ಲಿ ಚಂದೇರ ಪೊಲೀಸರು ಯಶಸ್ವಿಯಾಗಿದ್ದಾರೆ.

ವೆಂಬಿರಿನ್ ನಿಧಿನ್(30) ಅಪಹರಣಕ್ಕೊಳಗಾದ ವ್ಯಕ್ತಿ. ಬಂಧಿತ ವ್ಯಕ್ತಿಗಳನ್ನು ಚೆರುವತ್ತೂರು ಮಲ್ಲಾಕುದಿರಿನ ಎಂ.ಝಕರ್(27), ಮುಹಮ್ಮದ್ ಶರೀಫ್ (30), ಚರುವತ್ತೂರು ಪಿಲಾವಳಪ್ಪಿನ ಮುಹಮ್ಮದ್ ಅನಸ್(20) ಮತ್ತು ಚೆರುವತ್ತೂರು ರಾಜೇಂದ್ರ ಕ್ವಾರ್ಟಸ್‌ನ ಮುಹಮದ್ ಸಿದ್ದೀಕ್(23) ಎಂದು ಗುರುತಿಸಲಾಗಿದೆ.

ಯುವಕನನ್ನು ಆಟೋ ರಿಕ್ಷಾದಲ್ಲಿ ಚರುವತ್ತೂರು ರೈಲು ನಿಲ್ದಾಣ ಪರಿಸರದಿಂದ ಅಪಹರಿಸಿದ್ದು, ಮಾರಕಾಯುಧಗಳಿಂದ ಹಲ್ಲೆ ಮಾಡಿ, ಅವರಲ್ಲಿದ್ದ 1800 ರೂ. ನಗದು ಮತ್ತು ಮೊಬೈಲ್‌ ಫೋನ್ ಎಗರಿಸಿದ್ದಾರೆ. ನಂತರದಲ್ಲಿ ಅವರನ್ನು ರಸ್ತೆ ಬದಿಯಲ್ಲಿ ತಳ್ಳಿ ಪರಾರಿಯಾಗಿದ್ದು, ಇದೀಗ ನಾಲ್ವರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!