ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಫಿಲಿಯೇಶನ್ ಅನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ರದ್ದುಪಡಿಸಿದೆ.
ಅಫಿಲಿಯೇಷನ್ ರದ್ದುಪಡಿಸಿರುವುದು ತಮ್ಮ ಹೋರಾಟಕ್ಕೆ ಸಂದ ಜಯ ಎಂದು ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಉಡುಪಿ ಶಾಸಕ ರಘಪತಿ ಭಟ್ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಹಾಲಿ ಬೆಂಗಳೂರು ಬ್ಯಾಡ್ಮಿಂಟನ್ ಕ್ಲಬ್ ಸದಸ್ಯರಿಗೆ ಮಾತ್ರ ಕ್ರೀಡಾ ಚಟುವಟಿಕೆಗೆ ಸಂಬಂಧಿಸಿದ ಲಾಭ ದೊರೆತಿದ್ದು, ಜಿಲ್ಲಾ ಬ್ಯಾಡ್ಮಿಂಟನ್ ಸಂಘಕ್ಕೆ ಯಾವುದೇ ಲಾಭ ದೊರೆಯುತ್ತಿರಲಿಲ್ಲ. ಜತೆಗೆ ಈಗಿರುವ ಬ್ಯಾಡ್ಮಿಂಟನ್ ಆಫ್ ಇಂಡಿಯಾದ ಬೈಲಾ ಹಾಗೂ ಕೇಂದ್ರ ಸರ್ಕಾರದ ನೀತಿಗೆ ವಿರುದ್ಧವಾಗಿರುವುದರಿಂದ ಈ ಅಫಿಲಿಯೇಶನ್ ರದ್ದುಪಡಿಸಲಾಗಿದೆ.
ಈ ಕುರಿತಂತೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದ ಶಾಸಕ ರಘುಪತಿ ಭಟ್ ಸರ್ಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ಸಿಎಂ ಸೂಚನೆಯಂತೆ ಕ್ರೀಡಾ ಇಲಾಖೆ ಎಸಿಎಸ್ ಶಾಲಿನಿ ರಜನೀಶ್ ಇದಕ್ಕೆ ಸಂಬಂಧಿಸಿದ ಪೂರಕವಾದ ಸೂಕ್ತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪೊ್ ಇಂಡಿಯಾ ಇವರಿಗೆ ಸಲ್ಲಿಸಿದ್ದರು. ಅದರಂತೆ ಬ್ಯಾಡ್ಮಿಂಟನ್ ಆಪ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ.
ರಘಪತಿ ಭಟ್ ನೇತೃತ್ವದ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗಳ ತಂಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಮತ್ತು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ನ್ಯೂನತೆಗಳ ಬಗ್ಗೆ ಮನವರಿಕೆ ಮಾಡಿತ್ತು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಲ್ಲಿ 2500 ಮಂದಿ ಅಜೀವ ಸದಸ್ಯರಿದ್ದು, ಎಲ್ಲಾ ಜಿಲ್ಲೆಗಳಿಂದ 21 ಸದಸ್ಯರನ್ನು ಹೊಂದಲಾಗಿದೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ ಕ್ಲಬ್ ನಲ್ಲಿ ಆಟಗಾರರಲ್ಲದವರು ಸದಸ್ಯರಾಗಿದ್ದು, ಇದು ಬಿಎಐ ಬೈಲಾಗಳಿಗೆ ವಿರುದ್ಧವಾಗಿದೆ ಎಂದು ರಘುಪತಿ ಭಟ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.