- Advertisement -
- Advertisement -
ಬಂಟ್ಟಾಳ: ತಾಲೂಕಿನ ಕಲ್ಲಡ್ಕ ಸಮಿಪದ ಅನಂತಾಡಿ ಗ್ರಾಮದ ಸುಳ್ಲಮಲೆ ಗುಡ್ಡೆಯಲ್ಲಿ ಗಂಧದ ಮರ ಕಡಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಸ್ಥಳೀಯ ಯುವಕರ ತಂಡ ದಾಳಿ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ಇಂದು ನಡೆದಿದೆ.
ಇಬ್ಬರು ಆರೋಪಿಗಳನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು, ಇನ್ನು ಪರಾರಿಯಾಗಿರುವ ಮತ್ತಿಬ್ಬರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಾತೂರು ನಿವಾಸಿ ಇಬ್ರಾಹಿಂ ಮತ್ತು ಇರಾ ಗ್ರಾಮದ ಮೊಹಿದ್ದೀನ್ ಬಂಧಿತ ಆರೋಪಿಗಳು.
ಪರಾರಿಯಾಗಿರುವ ಇಬ್ಬರನ್ನು ಸಿದ್ದಿಕ್ ಮತ್ತು ಕೊರಂಗು ಸಿದ್ದಿಕ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಅಂದಾಜು ಲಕ್ಷ ರೂ ಮೌಲ್ಯದ ಶ್ರೀಗಂಧ ಮರಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ ಕಾಡು ಪ್ರಾಣಿ ‘ಉಡ’ವನ್ನು ವಶಕ್ಕೆ ಪಡೆಯಲಾಗಿದೆ. ಗಂಧದ ಮರ ಕದಿಯಲು ತೆರಳಿದ್ದ ವೇಳೆ ಈ ಉಡವನ್ನು ಬೇಟೆ ಮಾಡಿದ್ದಾರೆ ಎಂದು ತಿಳಿದುಬಂದಿದೆ .
- Advertisement -