- Advertisement -
- Advertisement -
ಉಡುಪಿ: ಹಿರಿಯಡ್ಕ ಸಮೀಪದ ಅಂಜಾರಿನ ತೋಟದ ಮನೆಯಲ್ಲಿ ಹೋಟೆಲ್ ಉದ್ಯಮಿ, ರಾಜಕಾರಣಿ ಕಡಿಯಾಳಿಯ ರಘು ಭಟ್(48) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಉಡುಪಿ ನಗರಸಭೆ ಚುನಾವಣೆಯಲ್ಲಿ ಕಡಿಯಾಳಿ ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದ ಇವರು ಪರಾಭವಗೊಂಡಿದ್ದರು ಇತ್ತೀಚೆಗೆ ಇವರು ಬಿಜೆಪಿ ಪಕ್ಷವನ್ನು ಸೇರಿದ್ದರು.
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
- Advertisement -