Friday, May 3, 2024
Homeಜ್ಯೋತಿಷ್ಯಬುಧವಾರದ ದಿನಭವಿಷ್ಯ: ಯಾವ ರಾಶಿಗೆ ಶುಭ.. ಯಾವ ರಾಶಿಗೆ ಅಶುಭ ?

ಬುಧವಾರದ ದಿನಭವಿಷ್ಯ: ಯಾವ ರಾಶಿಗೆ ಶುಭ.. ಯಾವ ರಾಶಿಗೆ ಅಶುಭ ?

spot_img
- Advertisement -
- Advertisement -

ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪರಿಹಾರ ಶಾಸ್ತ್ರ
ನಂಬಿ ನಂಬದಿರಿ ಇದು ಸತ್ಯ. ನಿಮ್ಮ ನಂಬಿಕೆಗಳಿಗೆ ಇಲ್ಲಿ ಮೋಸವಿಲ್ಲ
ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರಬದ್ಧವಾಗಿ ಶೀಘ್ರದಲ್ಲೇ ಪರಿಹಾರ ಮಾಡಿಕೊಡುತ್ತಾರೆ
ಗುರೂಜಿ ಹನುಮಂತರಾವ್
9686487402


ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ ಉಪರಿ ದ್ವಾದಶಿ ತಿಥಿ,
ಬುಧವಾರ, ಭರಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:24 ರಿಂದ 2:00
ಗುಳಿಕಕಾಲ: ಬೆಳಗ್ಗೆ 10:48 ರಿಂದ 12:24
ಯಮಗಂಡಕಾಲ: ಬೆಳಗ್ಗೆ 7:36 ರಿಂದ 9:12

ಮೇಷ
ಧಾರ್ಮಿಕ ಕಾರ್ಯಕ್ರಮ ಶಂಕುಸ್ಥಾಪನೆಗೆ ಅವಕಾಶ. ಆರ್ಥಿಕವಾಗಿ ಸಮಸ್ಯೆಗಳ ತಂತ್ರಗಳ ಜೋಡಣೆ, ರೂಪಣೆ, ಸಫ‌ಲತೆಯನ್ನು ತಂದುಕೊಡಲಿದೆ. ವಾಹನ ಮಾಲೀಕರಿಗೆ ಯಂತ್ರೋಪಕರಣಗಳಿಂದ ಖರ್ಚು-ವೆಚ್ಚಗಳು ಅಧಿಕವಾಗುತ್ತದೆ. ವೃತ್ತಿರಂಗದಲ್ಲಿ ಇಚ್ಛಿತ ಸ್ಥಳಕ್ಕೆ ಕೆಲಸದ ನಿಯೋಜನೆ. ಹೂಡಿಕೆಗಳಲ್ಲಿ ಕೊಂಚ ಚೇತರಿಕೆ. ಸಾಂಸಾರಿಕವಾಗಿ ಸಣ್ಣಪುಟ್ಟ ಸಮಸ್ಯೆಗಳಿಂದ ದೊಡ್ಡ ಸಮಸ್ಯೆ ಉದ್ಭವ. ಸಹೋದರ ಜೊತೆ ಹೊಂದಾಣಿಕೆ ಮುಖ್ಯ. ಪ್ರೇಮಿಗಳಿಗೆ ವಿಶ್ವಾಸ ಮರುಸೃಷ್ಟಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ವೃಷಭ
ಕುಟುಂಬದಲ್ಲಿ ಶುಭಕಾರ್ಯಕ್ಕೆ ಸಂಬಂಧಪಟ್ಟ ವಿವಾಹ ಕಾರ್ಯ ಸಂತಸ ತರಲಿದೆ. ಬಂಧು ಕುಟುಂಬಿಕರ ಒಂದೇ ಕಡೆ ಸೇರುವ ಅವಕಾಶ. ಇಚ್ಛಿತ ಕೆಲಸ ಕಾರ್ಯಗಳು ಸರಳ ರೀತಿಯಲ್ಲಿ ನಡೆಯಲಿವೆ. ವಾಣಿಜ್ಯ, ವಿತ್ತಖಾತೆಗೆ ಸಂಬಂಧಪಟ್ಟ ಕಾರ್ಯ ಗಳಲ್ಲಿ ಪ್ರಗತಿ ತೋರಿಬರುತ್ತದೆ. ಹೂಡಿಕೆಗಳಲ್ಲಿ ಚೇತರಿಕೆ, ಉದ್ಯೋಗದಲ್ಲಿ ಇಚ್ಛಿತ ಬದಲಾವಣೆ ಸಂಭವನೀಯ. ಕೀಳರಿಮೆ, ದೌರ್ಬಲ್ಯಗಳಿಂದ ಮನಸ್ತಾಪ. ವಾಹನ, ಭೂಖರೀದಿ, ಮನೆನಿರ್ಮಾಣ ಕಾರ್ಯ ಪತ್ನಿಯ ಮಾರ್ಗದರ್ಶನ ಹಾಗೂ ಸಹಾಯದಿಂದ ಯಶಸ್ಸು. ಶುಭಮಂಗಲ ಜರುಗುವುದು. ಪ್ರೇಮಿಗಳ ಮದುವೆ ಪ್ರಸ್ತಾಪ ಹಿರಿಯರ ಹತ್ತಿರ ಬೇಡಿಕೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಮಿಥುನ
ತುರ್ತು ಕೆಲಸದ ನಿಮಿತ್ತ ಮನೆಯಿಂದ ದೂರ ಇರುವ ಸಾಧ್ಯತೆ. ವೃತ್ತಿರಂಗದಲ್ಲಿ ಎಷ್ಟೇ ತೊಂದರೆ ಇದ್ದರೂ ಮುಂದುವರೆಸುವ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಹಿರಿಯ ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ಒಮ್ಮೊಮ್ಮೆ ಸಹೋದ್ಯೋಗಿಗಳ ವರ್ತನೆಯಿಂದ ಮಾನಸಿಕವಾಗಿ ತೊಂದರೆ ಕಾಡಲಿದೆ. ಸಮಾಧಾನದಿಂದ ಮುಂದು ವರಿಯಿರಿ. ಧನಾರ್ಜನೆಯಲ್ಲಿ ಪ್ರಗತಿ. ಖರ್ಚುವೆಚ್ಚಗಳು ಅಧಿಕ. ಮನೆ ಕಟ್ಟುವ ವಿಳಂಬ. ಶಿಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ನಿವೇಶನ ಖರೀದಿ ಸುವ ಭಾಗ್ಯ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಕಟಕ
ಹಣಕಾಸಿನ ಒತ್ತಡದಿಂದ ಮಾನಸಿಕ ಅಶಾಂತಿಗೆ ಕಾರಣವಾದೀತು. ಸ್ನೇಹಿತರಲ್ಲಿ ಕಲಹ. ಬಂಧು ಬಳಗದ ಜೊತೆ ಮನಸ್ತಾಪದ ಪ್ರಸಂಗ ತೋರಿ ಬಂದೀತು. ಆರೋಗ್ಯ ಎದೆನೋವಿನಿಂದ ನಿವಾರಣೆ. ಹಣಕಾಸಿನ ವಿಚಾರಣೆಯಲ್ಲಿ ವಿವಾದಗಳು ಕಂಡು ಬರಲಿದೆ. ಹೊಂದಾಣಿಕೆಯ ಪ್ರಯತ್ನ ಮಾಡಿರಿ. ವೃತ್ತಿರಂಗದಲ್ಲಿ ಅಧಿಕಾರಿ ವಲಯದಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹವು ಲಭಿಸಲಿದೆ. ನಿರುದ್ಯೋಗಿಗಳು ತಮ್ಮ ಉದಾಸೀನತೆಯನ್ನು ಬಿಟ್ಟು ಪ್ರಯತ್ನಬಲ ಮುಂದುವರಿಸಬೇಕು. ಪ್ರೇಮಿಗಳು ದುಡುಕಿನ ನಿರ್ಧಾರ ಪಶ್ಚಾತಾಪ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಸಿಂಹರಾಶಿ
ಮಕ್ಕಳ ಶುಭಕಾರ್ಯಗಳ ಚಿಂತನೆ. ನಿಮ್ಮ ಮಕ್ಕಳ ಭವಿಷ್ಯದ ವಿಚಾರಧಾರೆ ಕಾರ್ಯರೂಪಕ್ಕೆ ಬರಲಿದೆ. ಧನಾರ್ಜನೆಯಲ್ಲಿ ಕೊಂಚ ನೆಮ್ಮದಿ.ಭೂ ನಿವೇಶನ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ನ್ಯಾಯಾಲಯ ಮೆಟ್ಟಿಲು ಹತ್ತುವ ಪ್ರಸಂಗ. ಧಾರ್ಮಿಕ ಗುರುಗಳ ಭೇಟಿ. ಮಾನಸಿಕವಾಗಿ ನೆಮ್ಮದಿ ತಂದೀತು. ದೈವಾನುಗ್ರಹವು ಉತ್ತಮವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ಕಾಡಲಿವೆ. ದುಂದುವೆಚ್ಚಾದಿಗಳ ಬಗ್ಗೆ ಕಡಿವಾಣ ಹಾಕಿರಿ. ನಿಮ್ಮ ಮಕ್ಕಳಿಗೆ ಸಹವಾಸದೋಷದಿಂದ ಅನಗತ್ಯವಾದ ಅಪವಾದವು ಕಾಡಲಿದೆ. ಹಳೆಯ ಸಂಗಾತಿ ಆಕಸ್ಮಿಕ ಬೇಟಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಕನ್ಯಾ
ಆರ್ಥಿಕ ವಿಚಾರದಲ್ಲಿ ಆಶಾದಾಯಕ ಮೂಡಲಿದೆ. ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ. ಕುಟುಂಬದ ವಾತಾವರಣವು ಅಸಮಾಧಾನಕ್ಕೆ ಕಾರಣವಾದೀತು. ಕೌಟುಂಬಿಕ ವಾದ-ವಿವಾದ, ಕಲಹಗಳು ಉಪಶಮನವಾಗಲಿವೆ. ಹಿತ ಶತ್ರುಗಳಿಂದ ವಿರೋಧಿಗಳಿಗೆ ಆಮಿಷ. ರಾಜಕೀಯ ವರ್ಗದವರಿಗೆ ನಿಮ್ಮ ಅನುಯಾಯಿಗಳಿಂದ ಆತಂಕ ತಂದೀತು. ಮಕ್ಕಳ ಆರೋಗ್ಯ, ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಇನ್ನೊಬ್ಬರ ಬಗ್ಗೆ ನಿಂದನೆ ಮಾಡಿ ಸಮಸ್ಯೆ ಮಾಡಿಕೊಳ್ಳುವಿರಿ. ವಿವಾಹ ಸಮಸ್ಯೆ ಮುಂದುವರೆಯಲಿದೆ. ದಂಪತಿಗಳಿಗೆ ಸಂತಾನದ ಸಮಸ್ಯೆ ಕಾಡಲಿದೆ. ವೈದ್ಯಕೀಯ ಸಲಹೆ ಪ್ರಯೋಜನವಾಗಲಿಲ್ಲ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ತುಲಾ
ಮಂದಗತಿಯಲ್ಲಿ ಸಾಗಲಿರುವ ಕೆಲಸ ಕಾರ್ಯ ಕಿರಿಕಿರಿಯೆನಿಸಿದರೂ ಸಮಾಧಾನ ತರಲಿದೆ. ಸ್ಥಗಿತ ಗೊಂಡ ಮದುವೆ ಮಾತುಕತೆ ಸಫ‌ಲವಾಗಲಿದೆ. ಕುಟುಂಬದಲ್ಲಿ ಪತ್ನಿಯ ಜೊತೆ ತುಸು ನೆಮ್ಮದಿ. ನಿಮ್ಮ ಪ್ರಾಮಾಣಿಕ ಪ್ರಯತ್ನ ಶ್ರೇಯಸ್ಸು ಉಂಟಾಗುವುದು. ತುರ್ತು ಕೆಲಸದ ನಿಮಿತ್ಯ ಮನೆಯಿಂದ ದೂರವಿರಿ. ನೀವು ಮಾಡುವಂತ ಕೆಲಸದಲ್ಲಿ ಮನೋದೃಢತೆ, ದಿಟ್ಟತನದ ಪ್ರವೃತ್ತಿಯಿಂದ ಪ್ರಗತಿಯ ಮುನ್ನಡೆಯನ್ನು ಸಾಧಿಸಲಿದ್ದೀರಿ. ಗುರಿಯತ್ತ ನಡೆಯಲು ದೃಢ ಮನಸ್ಸು ಮಾಡಿರಿ. ಉದ್ಯೋಗದಲ್ಲಿ ಬಡ್ತಿ ಸ್ಥಾನಪಲ್ಲಟದ ಭರವಸೆ. ಮೇಲಾಧಿಕಾರಿಗಳು ನಿಮ್ಮನ್ನು ಸಹಕರಿಸುವರು. ರಸದೌತಣ ಸೇವಿಸಲಿದ್ದೀರಿ. ಸಂಗಾತಿಯೊಡನೆ ಸರಸ ಸಲ್ಲಾಪ, ಮದುವೆಗೆ ವಿರೋಧ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ವೃಶ್ಚಿಕ
ಧನಾರ್ಜನೆಯ ಅವಕಾಶಗಳು ಹೇರಳವಾಗಿ ಬರಲಿದೆ. ನಿಮ್ಮ ನೇತೃತ್ವದಲ್ಲಿ ಪೂರ್ವನಿಯೋಜಿತ ಕೆಲಸಕಾರ್ಯಗಳ ಮುನ್ನಡೆಗಾಗಿ ನಡೆಸುವ ಪ್ರಯತ್ನಗಳು ಫ‌ಲ ನೀಡಲಿವೆ. ಬಂಧುಮಿತ್ರರ ಸಹಕಾರ ಸಿಗಲಿದೆ . ಬಹುಮುಖ್ಯ ಕಾರ್ಯಗಳಿಗೆ ಅನುಕೂಲ. ಸಾಮಾಜಿಕ ಕೆಲಸಕಾರ್ಯಗಳಿಗಾಗಿ ಭಾಗವಹಿಸುವ ಅವಕಾಶ. ಕೊಂಚ ಕಲಹ ಪ್ರಸಂಗ ಎದುರಿಸುವ ಸಂಭವ. ವೃತ್ತಿರಂಗದಲ್ಲಿ ಕಳಂಕ ರಹಿತವಾಗಿ ನಿವೃತ್ತಿ ಹೊಂದ ಲ್ಲಿದ್ದಿರಿ.ಕೆಲಸ ಕಾರ್ಯಗಳು ಸರಾಗವಾಗಿ ನಡೆದುಹೋಗಲಿವೆ. ಗೃಹಕೃತ್ಯದಲ್ಲಿ ಅಡಚಣೆಗಳು ಕಾಡಲಿವೆ. ಸರಕಾರಿ ನೌಕರಿಗಾಗಿ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫ‌ಲಿತಾಂಶವಿದೆ. ಪ್ರೇಮಿಗಳ ಮದುವೆ ಹಿರಿಯರ ವಿರೋಧ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಧನು
ಒತ್ತಡದ ನಡುವೆಯೂ ಕಾರ್ಯನಿರ್ವಹಣೆಯಲ್ಲಿ ಗುರಿ ಮುಟ್ಟುವಿರಿ. ಮೇಲಧಿಕಾರಿಯಿಂದ ಉತ್ತಮ ಪ್ರಶಂಸೆ. ತಮಗೆ ಯಾರ ಸಹಕಾರ ಇಲ್ಲದ ಕಾರಣ ವಿರೋಧಿಗಳಲ್ಲಿ ಹೊಂದಾಣಿಕೆ ಮಾಡಿಕೊಂಡಲ್ಲಿ ಉತ್ತಮ. ಸಾಲ ಮರುಪಾವತಿಯ ಬಗ್ಗೆ ಒತ್ತಡ. ಗಂಡ ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ. ವ್ಯಾಪಾರ, ವ್ಯವಹಾರ ಪ್ರಾರಂಭ ಬೇಡ. ಭೂ, ನಿವೇಶನ, ಗೃಹ ನಿರ್ಮಾಣ ಕಾರ್ಯಗಳು, ನೂತನ ವ್ಯಾಪಾರ, ವ್ಯವಹಾರಗಳಿಗೆ ಇದು ಸಕಾಲವಲ್ಲ. ಕಠಿಣ ಪರಿಶ್ರಮ ಹಾಗೂ ಸತತ ಶ್ರಮದಿಂದ ಉನ್ನತ ಪರೀಕ್ಷೆಯಲ್ಲಿ ಉತ್ತೀರ್ಣ. ಪ್ರೇಮಿಗಳ ಮದುವೆ ಜಾತಿ ಇಂದ ಅಡತಡೆ. ಪತ್ನಿಗೆ ಪದೇ ಪದೇ ಗರ್ಭ ನಷ್ಟ ಸಂಭವ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಮಕರ
ಅಪರೂಪದ ಸುವರ್ಣಾವಕಾಶ ಒಳ್ಳೆಯ ಸೂಚನೆ ತಂದುಕೊಡಲಿದೆ. ನಿಮ್ಮ ಪೂರ್ವನಿಯೋಜಿತ ಯೋಚನೆಯಿಂದ ಆರ್ಥಿಕ ಬಿಕ್ಕಟ್ಟಿ ನಿಂದ ಪಾರಾಗಲಿದ್ದೀರಿ. ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲದ ಯೋಗವು ಒದಗಿಬರಲಿದೆ. ಸಾಮಾಜಿಕ ಸೇವಾಕಾರ್ಯಗಳಲ್ಲಿ ನಿಮ್ಮ ಕಾರ್ಯ ಸಾಧನೆ ಗುರುತಿಸಲ್ಪಡುವ ಪ್ರಸಂಗ. ಧಾರ್ಮಿಕ ಕಾರ್ಯಗಳಿಂದ ಮಾನಸಿಕ ಶಾಂತಿ, ಸಮಾಧಾನ. ಶ್ರೀಗುರುವನ್ನು ಆರಾಧಿಸುವುದು ಮುಖ್ಯವಾಗಿದೆ. ಮದುವೆಯಾದ ಪ್ರೇಮಿಗಳಿಗೆ ಮನಸ್ತಾಪ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಕುಂಭ
ಸಹೋದ್ಯೋಗಿಗಳಿಂದ ಹೊಂದಾಣಿಕೆ ಅಗತ್ಯವೆನಿಸಲಿದೆ. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲ ಒದಗಿಬರಲಿದೆ. ದೇಹಾರೋಗ್ಯದಲ್ಲಿ ಸುಧಾರಣೆ ಸಮಾಧಾನ ತರಲಿದೆ. ನಿರೀಕ್ಷೆಯಲ್ಲಿದ್ದ ಅವಕಾಶ ಕೈ ತಪ್ಪುವ ಸಾಧ್ಯತೆ. ಮದ್ಯಸ್ತಿಕೆ ಜನರ ಬಗ್ಗೆ ಜಾಗೃತಿ ವಹಿಸಿ. ಧನಾರ್ಜನೆಯಲ್ಲಿ ವಿವಿಧ ರೀತಿಯ ಮಾರ್ಗ ಸಫ‌ಲತೆ ತಂದೀತು. ಶತ್ರುಭಯ ನಿವಾರಣೆ, ಉದ್ದೇಶಿತ ಕಾರ್ಯದಲ್ಲಿ ಸಿದ್ಧಿ. ಗೃಹ, ಭೂ, ವಾಹನಾದಿಗಳಿಗಾಗಿ ಧನವ್ಯಯ ವಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಮಾತಾಪಿತೃ ಆರೋಗ್ಯದಲ್ಲಿ ಶಸ್ತ್ರಚಿಕಿತ್ಸೆ ಸಂಭವ.ಪತ್ನಿಗೆ ಉದರ ದೋಷ ಕಾಣಲಿದೆ. ಮಕ್ಕಳ ನಡುವಳಿಕೆಯಿಂದ ಬೇಸರ. ಕುಲದೇವತಾ ಸಂದರ್ಶನ ಭಾಗ್ಯ ಒದಗಿಬರಲಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಮೀನ
ಶುಭಮಂಗಲ ಕಾರ್ಯಗಳಿಗಾಗಿ ಆತ್ಮೀಯರಿಂದ ಭರವಸೆ. ವೃತ್ತಿರಂಗದಲ್ಲಿ ವಿರೋಧ. ಮದ್ಯಸ್ತಿಕೆ ಚಾಡಿ ಮಾತಿನಿಂದ ಅವಮಾನ. ಆರ್ಥಿಕ ಕಾರ್ಯದಲ್ಲಿ ಪ್ರಗತಿ ಇದೆ. ವ್ಯಾಪಾರಿಗಳಿಗೆ ಹೆಚ್ಚಿನ ಆದಾಯವಿರುತ್ತದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ. ಒಣ ಪ್ರತಿಷ್ಠೆತೆ ನಿಮಗೆ ಸಮಸ್ಯೆ ಕಾಡಲಿದೆ. ನಿಮ್ಮ ಮನಸ್ಸಿನ ನೋವನ್ನು ಹಂಚಿಕೊಳ್ಳಿರಿ. ಸಾಲಗಾರರಿಂದ ತುಂಬಾ ಕಿರಿಕಿರಿ. ಮದುವೆ ಕಾರ್ಯ ವಿನಾಕಾರಣ ಮುಂದೂಡುವ ಸಂಭವ. ಹಳೆಯ ನಿವೇಶನ ವಾಸ್ತು ಪ್ರಕಾರ ಪರಿವರ್ತನೆ ಸಾಧ್ಯತೆ. ಜಮೀನು ಮಾರಾಟ ವಿಳಂಬ. ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

- Advertisement -
spot_img

Latest News

error: Content is protected !!