- Advertisement -
![]()
- Advertisement -
ಉತ್ತರಾಖಂಡ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮ ಪ್ರವಾಹ ಉಂಟಾಗಿದ್ದು, ಅದಕ್ಕೆ ಈಗಾಗಲೇ 30ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದೀಗ ಚಳಿಗಾಲದಲ್ಲಿ ನೀರ್ಗಲ್ಲು ಕರಗಿ ಸರೋವರ ಸ್ಪೋಟಿಸಿರುವುದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ. ಘಟನೆಯಲ್ಲಿ ನೆರೆಯ ರಾಷ್ಟ್ರ ಚೀನಾದ ಕೈವಾಡ ಕೇಳಿಬರುತ್ತಿದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ನೀರ್ಗಲ್ಲು ಸ್ಪೋಟವಾಗುವುದು ಅಸಾಧ್ಯ ಎಂಬ ವಿಷಯದ ಮಧ್ಯೆ ಹಿಮಾಲಯ ಪರ್ವತಗಳಲ್ಲಿ ಚೀನಾ ನಡೆಸುತ್ತಿರುವ ವಿವಿಧ ಪ್ರಯೋಗಗಳು ನೀರ್ಗಲ್ಲು ಸ್ಪೋಟಕ್ಕೆ ಕಾರಣವಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
- Advertisement -


