- Advertisement -
- Advertisement -
ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಪ್ರವೇಶಾತಿಗೆ ಉನ್ನತ ಗುಣಮಟ್ಟದ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.ಈ ನಿಯಮ ಜಾರಿಗೆ ತಜ್ಞರ ಸಮೀತಿ ಈಗಾಗಲೇ ತಂಡ ರಚಿಸಿ ವರದಿ ತಯಾರಿಕೆಗೆ ಮುಂದಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜು ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ 12 ನೇ ತರಗತಿ ಫಲಿತಾಂಶವನ್ನು ಆಧರಿಸಿ ಕಟ್ ಆಫ್ ಮಾರ್ಕ್ಸ್ ಕಿರಿಕಿರಿ ತಪ್ಪಿಸುವ ಸಲುವಾಗಿ ಸರ್ಕಾರ ಸಿಇಟಿ ನಡೆಸುವ ಸಾಧ್ಯತೆ ಇದೆ.ಹೀಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಸಿಇಟಿ ಬರೆದರೆ ಮಾತ್ರ ಕೇಂದ್ರ ವಿವಿಗಳಿಗೆ ಪ್ರವೇಶ ಒದಗಿಸಲಾಗುತ್ತದೆ ಎನ್ನಲಾಗಿದೆ.
- Advertisement -