- Advertisement -
- Advertisement -
ಧಾರವಾಡ : ಇಲ್ಲಿನ ಗಣೇಶ ನಗರದಲ್ಲಿ ಪತ್ನಿಯನ್ನು ಹತ್ಯೆಗೈದು ಪತಿಯೂ ನೇಣಿಗೆ ಶರಣಾದ ಘಟನೆ ನಡೆದಿದೆ. ದಂಪತಿ ಮಧ್ಯೆ ಗಲಾಟೆ ಹಿನ್ನೆಲೆ ಪತ್ನಿ ಮನೀಷಾ ( 25 ) ಳನ್ನು ಕೊಲೆ ಮಾಡಿದ್ದು , ಬಳಿಕ ಪತಿ ಗದಗವಾಲೆ ( 30 ) ನೇಣಿಗೆ ಶರಣಾಗಿದ್ದಾನೆ .
ನಾಲ್ಕು ದಿನಗಳ ಹಿಂದೆ ದಂಪತಿಗಳು ಗೋವಾದಲ್ಲಿ ಕೆಲಸಕ್ಕೆ ಎಂದು ಹೋಗಿಬಂದಿದ್ದರು. ಇಬ್ಬರ ನಡುವೆ ಜಗಳ ನಡೆದಿದ್ದು , ಬಳಿಕ ಪತ್ನಿಯನ್ನ ಕೊಲೆ ಮಾಡಿದ್ದಾನೆ. ನಂತರ ತಾನು ನೇಣಿಗೆ ಶರಣಾಗಿದ್ದಾನೆ .
ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -