- Advertisement -
- Advertisement -
ಸುಳ್ಯ: ದುಷ್ಕರ್ಮಿಗಳಿಂದ ಕೊಲೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಲ್ಲವ ಸಮಾಜ ಹಾಗೂ ಬಿಲ್ಲವ ಬ್ರಿಗೇಡ್ನ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ನಿರ್ಧರಿಸಿದ್ದಾರೆ. ಈಗಾಗಲೇ ಮನೆ ನಿರ್ಮಾಣಕ್ಕೆ
₹ 7 ಲಕ್ಷದ ಚೆಕ್ ಅನ್ನು ಮನೆಯವರಿಗೆ ನೀಡಿ, ಅದನ್ನು ಮನೆಯ ಕೆಲಸ ನಿರ್ವಹಿಸಲಿರುವ ಗುತ್ತಿಗೆದಾರರಿಗೆ ಹಸ್ತಾಂತರಿದ್ದಾರೆ.
ಬಿಲ್ಲವ ಸಮಾಜದ ಚಟುವಟಿಕೆಗಳಲ್ಲಿ ಪ್ರವೀಣ್ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು. ಅವರ ಆಶಯದಂತೆ ಸುಮಾರು ₹ 45 ಲಕ್ಷ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಡುವುದಾಗಿ ಬಿಲ್ಲವ ಸಮಾಜದ ಪ್ರಮುಖರು ಭರವಸೆ ನೀಡಿದ್ದಾರೆ. ಇದೇ ವೇಳೆ ಮನೆಯ ನಕ್ಷೆಯನ್ನು ಪ್ರವೀಣ್ ಕುಟುಂಬಕ್ಕೆ ತೋರಿಸಿ ಒಪ್ಪಿಗೆಯನ್ನು ಪಡೆದಿದ್ದಾರೆ.
ಈ ವೇಳೆ ಮುಖಂಡರಾದ ಭಾಸ್ಕರ್ ಎಸ್. ಕೋಟ್ಯಾನ್, ಜಯಂತ ನಡುಬೈಲ್, ಶರತ್ಚಂದ್ರ ಸನಿಲ್, ಗಂಗಾಧರ ಪೂಜಾರಿ, ಶಂಕರ್ ಕುಂದರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
- Advertisement -