ಹುಬ್ಬಳ್ಳಿ; ಪೊಲೀಸ್ ಠಾಣೆಗೆ ಬಂದಿದ್ದ ಜನರಿಗೆ ಕಾಲ್ ಮಾಡಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸಮಸ್ಯೆ ವಿಚಾರಿಸಿದ್ದಾರೆ. ಪೊಲೀಸ್ ಠಾಣೆಗೆ ಬಂದಿದ್ದ ಜನರಿಗೆ ಕಾಲ್ ಮಾಡಿ ಸಚಿವ ಡಾ.ಜಿ ಪರಮೇಶ್ವರ್ ಸಮಸ್ಯೆ ಆಲಿಸಿದ್ದಾರೆ.
ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಮೌನೇಶ್ ಎಂಬವರಿಗೆ ಜಿ ಪರಮೇಶ್ವರ್ ಕರೆ ಮಾಡಿದ್ದಾರೆ. ಜಿ ಪರಮೇಶ್ವರ್ ಅವರು ಮೌನೇಶ್ ಜೊತೆ ಮಾತಾಡಿದ ಆಡಿಯೋ ವೈರಲ್ ಆಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮೌನೇಶ್ ಅವರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದರು. ಅವರ ಬಳಿ ಏನ್ ಸಮಸ್ಯೆ ಆಗಿದೆ ಹೋಮ ಮಿನಿಸ್ಟರ್ ಕೇಳಿದ್ದಾರೆ. ಆಗ ಮೌನೇಶ್ ನಾನು ಮುಖೇಶ್ ಅನ್ನೋರಿಗೆ 40 ಸಾವಿರ ದುಡ್ಡು ಕೊಟ್ಟಿದ್ದೇನೆ.ನಾನು ಲೋನ್ ಮಾಡಿ ದುಡ್ಡು ಕೊಟ್ಟೀದಿನಿ ಎಂದು ಮೌನೇಶ ಹೇಳಿದ್ದಾರೆ. ಆಗ ಪರಮೇಶ್ವರ್ ಅವರು,ಅವರು ದುಡ್ಡು ಕೊಡ್ತೀನಿ ಅಂದ್ನೋ ಇಲ್ಬೋ ಎಂದು ಕೇಳಿದ್ದಾರೆ. ನಾನು ಕಂಪ್ಲೇಟ್ ಕೊಟ್ಟಿದೀನಿ. ಪೊಲೀಸ್ ನವರು ದುಡ್ಡು ಕೊಡಿಸ್ತೀವಿ ಅಂದಿದ್ದಾರೆ ಎಂದು ಮೌನೇಶ್ ಹೇಳಿದ್ದಾರೆ.
ಅದಕ್ಕೆ ಪರಮೇಶ್ವರ್ ಅವರು ದುಡ್ಡು ಕೊಡಿಸ್ತಾರೆ ಕಂಪ್ಲೇಟ್ ಆಗಿದೆ ತಾನೆ. ನಿಮ್ಮ ದುಡ್ಡು ಬರುತ್ತೆ ಎಂದು ಭರವಸೆ ಕೊಟ್ಟಿದ್ದಾರೆ.